alex Certify ಹೈದರಾಬಾದ್ ಪ್ರವಾಸದ ವೇಳೆ ಕಡ್ಲೆ ಗಿಡ ಕಂಡ ಕೂಡಲೇ ರುಚಿ ನೋಡಿದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್ ಪ್ರವಾಸದ ವೇಳೆ ಕಡ್ಲೆ ಗಿಡ ಕಂಡ ಕೂಡಲೇ ರುಚಿ ನೋಡಿದ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹೈದರಾಬಾದ್‌ನಲ್ಲಿ ICRISAT(ಅರೆ-ಶುಷ್ಕ ಉಷ್ಣವಲಯಕ್ಕಾಗಿ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ) ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರು ನಗರದ ಇಕ್ರಿಸ್ಯಾಟ್ ಫಾರ್ಮ್‌ ನಲ್ಲಿ ಹೊಸದಾಗಿ ಬೆಳೆದ ‘ಚನಾ'(ಕಡಲೆ) ರುಚಿಯನ್ನು ನೋಡಿದರು.

ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಧಾನಿ ಹಸಿರು ಜಮೀನಿನಲ್ಲಿ ಸಂಚರಿಸುತ್ತಾ, ಗಿಡಳಿಂದ ಕೆಲವು ಕಡಲೆ ಬೀಜಗಳನ್ನು ಕಿತ್ತು ತಿನ್ನುತ್ತಿರುವುದನ್ನು ಕಾಣಬಹುದು.

ಅವರು ಸಸ್ಯ ಸಂರಕ್ಷಣೆ ಮತ್ತು ಕ್ಷಿಪ್ರ ಜನರೇಷನ್ ಅಡ್ವಾನ್ಸ್‌ಮೆಂಟ್ ಫೆಸಿಲಿಟಿ ಕುರಿತು ICRISAT ನ ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯವನ್ನು ಉದ್ಘಾಟಿಸಿದರು. ಅಲ್ಲದೇ, ಸ್ಮರಣಾರ್ಥ ಅಂಚೆಚೀಟಿಯನ್ನು ಸಹ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸುವಲ್ಲಿ ಇತರ ರಾಷ್ಟ್ರಗಳಿಗೆ ಸಹಾಯ ಮಾಡುವ ಐದು ದಶಕಗಳ ಅನುಭವವನ್ನು ICRISAT ಹೊಂದಿದೆ ಎಂದು ಹೇಳಿದ್ದಾರೆ.

ಇಕ್ರಿಸ್ಯಾಟ್ ಕೃಷಿಯನ್ನು ಸುಲಭ ಮತ್ತು ಸುಸ್ಥಿರವಾಗಿಸಲು ಇತರ ರಾಷ್ಟ್ರಗಳಿಗೆ ಐದು ದಶಕಗಳಿಂದ ಸಹಾಯ ಮಾಡಿದ ಅನುಭವವನ್ನು ಹೊಂದಿದೆ. ಭಾರತದ ‘ಕೃಷಿ’ ಕ್ಷೇತ್ರವನ್ನು ಬಲಪಡಿಸಲು ಸಂಸ್ಥೆ ಜ್ಞಾನ, ಪರಿಣತಿ ನೀಡುವುದನ್ನು ಮುಂದುವರಿಸುತ್ತದೆ ಎಂದರು.

ರೈತರು ಮತ್ತು ಹವಾಮಾನ ಬದಲಾವಣೆಯಿಂದ ರೈತರ ಸವಾಲುಗಳ ಬಗ್ಗೆ ಮಾತನಾಡುತ್ತಾ, 2022-23 ರ ಕೇಂದ್ರ ಬಜೆಟ್ ನೈಸರ್ಗಿಕ ಕೃಷಿ ಮತ್ತು ಡಿಜಿಟಲ್ ಕೃಷಿಯ ಮೇಲೆ ಕೇಂದ್ರೀಕರಿಸಿದೆ. ಹವಾಮಾನದ ಸವಾಲಿನಿಂದ ನಮ್ಮ ರೈತರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ನಮಗೆ ಹೆಚ್ಚು ಅಗತ್ಯವಿರುವ ದೇಶದ ಶೇ. 80 ಕ್ಕಿಂತ ಹೆಚ್ಚು ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದೆ. 2022-23ರ ಕೇಂದ್ರ ಬಜೆಟ್ ನಲ್ಲಿ ನೈಸರ್ಗಿಕ ಕೃಷಿ ಮತ್ತು ಡಿಜಿಟಲ್ ಕೃಷಿಗೆ ಒತ್ತು ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮುಂದಿನ ಕೆಲವು ವರ್ಷಗಳಲ್ಲಿ, ನಾವು ಪಾಮ್ ಆಯಿಲ್ ವಲಯದಲ್ಲಿ ಪ್ರದೇಶದ ಬಳಕೆಯನ್ನು 6.5 ಲಕ್ಷ ಹೆಕ್ಟೇರ್‌ ಗಳಿಗೆ ವಿಸ್ತರಿಸಲಿದ್ದೇವೆ. ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಭದ್ರತೆಯ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಕಳೆದ 7 ವರ್ಷಗಳಲ್ಲಿ ನಾವು ಹಲವಾರು ಜೈವಿಕ-ಬಲವರ್ಧಿತ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...