alex Certify WATCH: ಮಳೆ ನಡುವೆ ರಸ್ತೆ ದಾಟಿಸಲು ವ್ಯಕ್ತಿಯಿಂದ ಸಖತ್‌ ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಮಳೆ ನಡುವೆ ರಸ್ತೆ ದಾಟಿಸಲು ವ್ಯಕ್ತಿಯಿಂದ ಸಖತ್‌ ಐಡಿಯಾ

ಜಗತ್ತಿನ ಅನೇಕ ದೇಶಗಳಲ್ಲಿ ವಿಪರೀತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಗರ ಪ್ರದೇಶಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಪರದಾಡುವುದು ಸಾಮಾನ್ಯವಾದ ಉದಾಹರಣೆ ಸಾಕಷ್ಟಿದೆ. ಬೆಂಗಳೂರಲ್ಲಿ ಅದೇ ಅನುಭವವಾಗಿದೆ.

ಆದರೆ, ಪ್ರತಿಕೂಲತೆಯ ನಡುವೆ ಜನರು ಸೃಜನಶೀಲ ಪರಿಹಾರಗಳೊಂದಿಗೆ ಬರುತ್ತಾರೆ. ವ್ಯಕ್ತಿಯೊಬ್ಬ ಚಕ್ರಗಳನ್ನು ಅಳವಡಿಸಲಾಗಿರುವ ಮರದ ಗಾಡಿಯೊಂದಿಗೆ ರಸ್ತೆ ದಾಟಲು ಪಾದಚಾರಿಗಳಿಗೆ ಸಹಾಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಆ ವ್ಯಕ್ತಿಯ ಸೃಜನಶೀಲತೆ ಮತ್ತು ಜಾಗರೂಕತೆ ಮೆಚ್ಚುವಂತಿದೆ. ವೆೈರಲ್​ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿ ಸಹಾಯವನ್ನು ಉಚಿತವಾಗಿ ನೀಡುತ್ತಿಲ್ಲ ಬದಲಾಗಿ ಮಳೆಯಿಂದ ಆಗುವ ತೊಂದರೆ ತಪ್ಪಿಸಲು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ.

ನೀಲಿ ಟೀ ಶರ್ಟ್​ ಧರಿಸಿರುವ ವ್ಯಕ್ತಿಯೊಬ್ಬರು ನೀರಿನಿಂದ ತುಂಬಿರುವ ರಸ್ತೆಯನ್ನು ದಾಟಲು ಸಹಾಯ ಮಾಡುತ್ತಿದ್ದು, ಇಬ್ಬರು ಪಾದಚಾರಿಗಳಿಂದ ಹಣವನ್ನು ಸಂಗ್ರಹಿಸುವುದನ್ನು ಇದು ತೋರಿಸುತ್ತದೆ.

ಆ ವ್ಯಕ್ತಿ ಹಣವನ್ನು ಬಾಟಲಿಯಲ್ಲಿ ಹಾಕಿ ನಂತರ ಇಬ್ಬರು ಜನರಿದ್ದ ಮರದ ಗಾಡಿಯನ್ನು ರಸ್ತೆಯ ಇನ್ನೊಂದು ಬದಿಗೆ ಸರಿಸುತ್ತಿರುವುದು ಕಂಡುಬರುತ್ತದೆ.

ಮನುಷ್ಯನ ಮರದ ಗಾಡಿ ಸಹಾಯದಿಂದ ಜನರು ನೀರು ತುಂಬಿದ ರಸ್ತೆ ದಾಟಲು ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ಕಾಣಬಹುದು.

ವೀಡಿಯೊವನ್ನು ಹಂಚಿಕೊಂಡ ರೆಡ್ಡಿಟರ್​, “ಅನಾನುಕೂಲತೆಯ ಸಮಯದಲ್ಲಿ ಹಣವನ್ನು ಗಳಿಸುವ ಪ್ರಯತ್ನ” ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...