alex Certify ಸ್ಪೀಕರ್​ ಭೇಟಿಗೆ ಕಾಲಾವಕಾಶ ಕೇಳಿದ್ರಾ ಆನಂದ್​ ಸಿಂಗ್​..? ಕಾಗೇರಿ ಹೇಳಿದ್ದಿಷ್ಟು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೀಕರ್​ ಭೇಟಿಗೆ ಕಾಲಾವಕಾಶ ಕೇಳಿದ್ರಾ ಆನಂದ್​ ಸಿಂಗ್​..? ಕಾಗೇರಿ ಹೇಳಿದ್ದಿಷ್ಟು..!

ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಆನಂದ್​ ಸಿಂಗ್​ಗೆ ಪ್ರವಾಸೋದ್ಯಮ ಖಾತೆ ನೀಡಿರೋದು ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಖಾತೆಯನ್ನು ಒಪ್ಪಿಕೊಳ್ಳಲು ಸುತಾರಾಂ ಒಪ್ಪದ ಆನಂದ್​ ಸಿಂಗ್​ ರಾಜೀನಾಮೆ ನೀಡಲು ತಯಾರಿ ನಡೆಸ್ತಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸ್ಪೀಕರ್​ ಭೇಟಿಗೆ ಆನಂದ್​ ಸಿಂಗ್​ ಸಮಯಾವಕಾಶ ಕೇಳಿದ್ದಾರೆ ಎಂಬ ವಿಚಾರ ಕೂಡ ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ಸ್ಪೀಕರ್​ ಭೇಟಿಗೆ ಆನಂದ್​ ಸಿಂಗ್​ ಕಾಲಾವಕಾಶ ಕೋರಿರುವ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಹತ್ವದ ಹೇಳಿಕೆ ನೀಡಿದ್ದಾರೆ.

ನನ್ನ ಭೇಟಿಗೆ ಕಾಲಾವಕಾಶ ಕೇಳಿದವರಿಗೆ ಖಂಡಿತವಾಗಿಯೂ ನಾನು ಅವಕಾಶ ನೀಡುತ್ತೇನೆ. ನಾನು ನನ್ನ ಮನೆ ಹಾಗೂ ಕಚೇರಿಯಲ್ಲಿ ಜನರಿಗೆ, ಜನಪ್ರತಿನಿಧಿಗಳಿಗೆ ಸದಾ ಲಭ್ಯವಿದ್ದೇನೆ. ಬೆಂಗಳೂರಿನಲ್ಲಿ ಯಾರು ನನ್ನನ್ನು ಭೇಟಿ ಮಾಡಲು ಬಯಸುತ್ತಾರೋ ಅವರಿಗೂ ನಾನು ಲಭ್ಯವಿದ್ದೇನೆ ಎಂದು ಹೇಳುವ ಮೂಲಕ ಆನಂದ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ್ದಾರೋ ಇಲ್ಲವೋ ಎಂದು ಸ್ಪಷ್ಟ ಅಭಿಪ್ರಾಯ ತಿಳಿಸಲು ನಿರಾಕರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...