ಉತ್ತರ ಪ್ರದೇಶದ ಸೋನ್ಭದ್ರಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಮದುವೆ ಸಂಭ್ರಮಾಚರಣೆಯಲ್ಲಿದ್ದ ವರನು ಗುಂಡು ಹಾರಿಸಿ ತನ್ನ ಸ್ನೇಹಿತನ ಹತ್ಯೆಗೆ ಕಾರಣನಾಗಿದ್ದಾನೆ.
ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದ ಈ ಆಘಾತಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿರುವಂತೆ ವರನು ರಥದ ಮೇಲೆ ನಿಂತು ಸಂಭ್ರಮಾಚರಣೆಯ ಭಾಗವಾಗಿ ಗುಂಡು ಹಾರಿಸುತ್ತಿರುವುದನ್ನು ನೋಡಬಹುದು. ಈ ಸಮಯದಲ್ಲಿ ಆತ ಹಾರಿಸಿದ ಗುಂಡು ಪಕ್ಕದಲ್ಲಿದ್ದ ಆತನ ಸ್ನೇಹಿತನಿಗೆ ತಗುಲಿದೆ.
ಕಾರ್ಮಿಕರ ಕನಿಷ್ಠ ವೇತನ 32 ಸಾವಿರ ರೂ. ನಿಗದಿಗೆ ಹೆಚ್ಚಿದ ಒತ್ತಡ
ಮೃತರನ್ನು ಬಾಬುಲಾಲ್ ಯಾದವ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಸೇನಾ ಜವಾನ್ ಆಗಿದ್ದಾರೆ. ವರ ಬಳಸಿದ ಬಂದೂಕು ಯಾದವ್ ಅವರದ್ದು. ಕೂಡಲೇ ಯಾದವ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.