alex Certify ಶಾಕಿಂಗ್​: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!

ಕೆರಳಿದ ಆನೆಯೊಂದು ತನ್ನ ಮಾವುತನನ್ನು ನೆಲಕ್ಕೆ ಕೆಡವಿದ ಆಘಾತಕಾರಿ ಘಟನೆಯೊಂದು ತ್ರಿಶ್ಯೂರಿನ ತಿರುವಿಲ್ವಾಮಲ ವಿಲ್ವಾದ್ರಿನಾಥ ದೇವಸ್ಥಾನದಲ್ಲಿ ನಡೆದಿದೆ. ನೆಲಕ್ಕೆ ಬಿದ್ದು ಇನ್ನೇನು ಆನೆಯ ಕಾಲ್ತುಳಿತಕ್ಕೆ ಸಿಲುಕುವ ಮುನ್ನ ಕೂದಲೆಳೆ ಅಂತರದಲ್ಲಿ ವ್ಯಕ್ತಿಯು ಪಾರಾಗಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಡಟ್ಟು ಪರಮು ಅಲಿಯಾಸ್​ ಪಣಚೇರಿ ಪರಮೇಶ್ವರಂ ಎಂಬ ಹೆಸರಿನ ಆನೆಯು ಇದಕ್ಕಿದಂತೆಯೇ ಕೆರಳಿತ್ತು. ದೇವಸ್ಥಾನದ ಸಿಬ್ಬಂದಿ ಕುಣಿಸೇರಿ ಸ್ವಾಮಿನಾಥನ್​​ ಆನೆಯ ಮೇಲೆ ಏರುತ್ತಿದ್ದಂತೆಯೇ ತಲೆ ಅಲುಗಾಡಿಸಿದ ಆನೆಯು ಅವರನ್ನು ನೆಲಕ್ಕೆ ಕೆಡವಿದೆ.

ಬಳಿಕ ಸ್ವಾಮಿನಾಥನ್​ ಮೇಲೆ ಆನೆ ದಾಳಿಗೆ ಮುಂದಾಗಿದೆ. ಆದರೆ ಅದೃಷ್ಟವಶಾತ್​ ಈ ದಾಳಿಯಿಂದ ಪಾರಾಗುವಲ್ಲಿ ಸ್ವಾಮಿನಾಥನ್​ ಯಶಸ್ವಿಯಾಗಿದ್ದಾರೆ. ದೇಗುಲದಲ್ಲಿ ಕಜ್ಜ ಸೀವೆಲಿ ಎಂಬ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೇರಳದ ದೇಗುಲಗಳಲ್ಲಿ ದೈನಂದಿನ ಪ್ರಾರ್ಥನೆಯ ವೇಳೆ ಆನೆಗಳು ಭಾಗಿಯಾಗುವುದು ಸಾಮಾನ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...