alex Certify ದಣಿದ ಶ್ವಾನಕ್ಕೆ ಬಾಯಾರಿಕೆ ನೀಗಿಸಿದ ಪುಟ್ಟ ಬಾಲಕ..! ಇದೇ ಅಲ್ವಾ ಮಾನವೀಯತೆ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಣಿದ ಶ್ವಾನಕ್ಕೆ ಬಾಯಾರಿಕೆ ನೀಗಿಸಿದ ಪುಟ್ಟ ಬಾಲಕ..! ಇದೇ ಅಲ್ವಾ ಮಾನವೀಯತೆ ಎಂದ ನೆಟ್ಟಿಗರು

To quench the dog's thirst, the innocent child jumped and jumped the  handpump, watching the video, people praised him fiercely- Newslead Indiaಸಂಕಷ್ಟದಲ್ಲಿರುವವರಿಗೆ ದಯೆ ಮತ್ತು ಸಹಾನುಭೂತಿ ತೋರುವುದು ಮಾನವೀಯತೆ ಲಕ್ಷಣವಾಗಿದೆ. ಮಕ್ಕಳಂತೂ ದೇವರ ಸಮಾನ ಅಂತಾ ಹೇಳುತ್ತಾರೆ.

ಹಾಗೆಯೇ ಮಕ್ಕಳಿಗೂ ದಯೆ, ಕರುಣೆ, ಪ್ರೀತಿ ಅನ್ನೋದು ತುಸು ಹೆಚ್ಚೇ ಇರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ನಾಯಿಮರಿಯ ಬಾಯಾರಿಕೆ ನೀಗಿಸಿದ ಬಾಲಕನ ವಾತ್ಸಲ್ಯಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಪುಟ್ಟ ಬಾಲಕನೊಬ್ಬ, ಬಾಯಾರಿದ ನಾಯಿಮರಿಗೆ ಬೋರ್ ವೆಲ್ ಪಂಪ್ ನಿಂದ ನೀರು ಕುಡಿಸಲು ತನ್ನಿಂದಾದಷ್ಟು ಪ್ರಯತ್ನ ಪಟ್ಟಿದ್ದಾನೆ. ಭಾರವಾದ ಪಂಪ್ ಹ್ಯಾಂಡಲ್ ಎತ್ತಲು ಕಷ್ಟವಾದ್ರೂ ಕೂಡ, ಬಾಲಕ ತನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದು, ಇದರಿಂದ ನೀರಿನ ಹನಿ ಹೊರಬರುತ್ತಿದ್ದಂತೆ ಬಾಯಾರಿದ ನಾಯಿಮರಿಯು ಹಾಯಾಗಿ ನೀರು ಕುಡಿದು, ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡಿದೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಎಷ್ಟೇ ಚಿಕ್ಕವರಾದರೂ ಯಾರು ಯಾರಿಗೆ ಬೇಕಿದ್ದರೂ ಸಾಧ್ಯವಾದಷ್ಟು ಸಹಾಯ ಮಾಡಬಹುದು ಎಂಬ ಶೀರ್ಷಿಕೆ ನೀಡಿದ್ದಾರೆ.

ಬಾಲಕನ ಕರುಣೆ, ಔದಾರ್ಯದ ವಿಡಿಯೋ ನೋಡಿದ ನೆಟ್ಟಿಗರ ಹೃದಯ ಕರಗಿದೆ. ಮಾನವೀಯತೆಗೆ ವಯಸ್ಸು, ಎತ್ತರ, ಶ್ರೀಮಂತಿಕೆ ಎಂದೂ ಅಡ್ಡಿ ಬರುವುದಿಲ್ಲ. ಇದು ಹೃದಯದಿಂದ ಬರುತ್ತದೆ ಎಂಬಂತಹ ಕಾಮೆಂಟ್ ಗಳನ್ನು ಬಳಕೆದಾರರು ಮಾಡಿದ್ದಾರೆ. ಇನ್ನೂ ಕೆಲವರು ಇಂತಹ ಮುದ್ದಾದ ವಿಡಿಯೋ ಹಂಚಿಕೊಂಡ ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.

— Dipanshu Kabra (@ipskabra) December 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...