alex Certify ಸ್ವರ ಮಾಂತ್ರಿಕ SPB ಜನ್ಮದಿನದಂದು ಬಿಡುಗಡೆಯಾಯ್ತು ವಿಶೇಷ ಹಾಡು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವರ ಮಾಂತ್ರಿಕ SPB ಜನ್ಮದಿನದಂದು ಬಿಡುಗಡೆಯಾಯ್ತು ವಿಶೇಷ ಹಾಡು…!

ಇಂದು ಸ್ವರ ಮಾಂತ್ರಿಕ ದಿವಂಗತ ಎಸ್​.ಪಿ. ಬಾಲಸುಬ್ರಮಣ್ಯಂರ ಜನ್ಮದಿನ. ಈಗಾಗಲೇ ಸಾಕಷ್ಟು ಸಂಗೀತಕಾರರು ಹಾಗೂ ಸಂಗೀತ ಪ್ರಿಯರು ಎಸ್​ಪಿಬಿಯವರನ್ನ ಸ್ಮರಿಸುತ್ತಿದ್ದಾರೆ. ಎದೆ ತುಂಬಿ ಹಾಡಲು ಮತ್ತೊಮ್ಮೆ ಕರುನಾಡಲೇ ಹುಟ್ಟಿಬನ್ನಿ ಎಂದು ಅನೇಕರು ಪ್ರಾರ್ಥನೆಯನ್ನೂ ಮಾಡ್ತಿದ್ದಾರೆ.

ಈ ನಡುವೆ ಸಂಗೀತ ನಿರ್ದೇಶಕ ವಿಘ್ನೇಶ್ವರ ಕಲ್ಯಾಣರಮಣ, ಎಸ್​ಪಿಬಿ 75ನೇ ವರ್ಷದ ಜನ್ಮದಿನದ ಪ್ರಯುಕ್ತ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಗಾನ ಗಂಧರ್ವನ ಜನ್ಮದಿನದ ಪ್ರಯುಕ್ತ ಎಸ್​ಪಿಬಿ ಹಾಡಿರುವ ವಿಘ್ನೇಶ್ವರ ಕಲ್ಯಾಣರಮಣ ಸಂಗೀತ ನಿರ್ದೇಶನದ ಕಾಥಡಿ ಮೇಘಂ ಹಾಡನ್ನ ರಿಲೀಸ್​ ಮಾಡಿದ್ದಾರೆ.

ಸ್ಟಾರ್​ ಮ್ಯೂಸಿಕ್​ ಇಂಡಿಯಾ ಯುಟ್ಯೂಬ್​ ಚಾನೆಲ್​​ನಲ್ಲಿ ಈ ಹಾಡನ್ನ ರಿಲೀಸ್​ ಮಾಡಲಾಗಿದೆ. ಕಾಥಡಿ ಮಗಮ್​ಗೆ ಕುಟ್ಟಿ ರೇವತಿಯವರ ಸಾಹಿತ್ಯವಿದೆ.

ವಿಘ್ನೇಶ್ವರ ಕಲ್ಯಾಣರಮಣರ ಈ ವಿಶೇಷ ಕೊಡುಗೆಗೆ ಹರಿಹರನ್​, ಶಂಕರ್​ ಮಹದೇವನ್​, ಲಿಯೋನ್​ ಜೇಮ್ಸ್​ ಸೇರಿದಂತೆ ಸಂಗೀತ ಲೋಕದ ದಿಗ್ಗಜರು ಧನ್ಯವಾದ ಅರ್ಪಿಸಿದ್ದಾರೆ.

ಬ್ರಿಟನ್​​ನಲ್ಲಿ ಮ್ಯೂಸಿಕ್​ ಪ್ರೊಡಕ್ಷನ್​​ ಕೋರ್ಸ್ ಮುಗಿಸಿದ ಬಳಿಕ ನಾನು ಚೆನ್ನೈನ ಸ್ಟುಡಿಯೋದಲ್ಲಿ ಸಹಾಯಕ ಸೌಂಡ್​ ಇಂಜಿನಿಯರ್​ ಆಗಿ ಕೆಲಸ ಮಾಡಲು ಆರಂಭಿಸಿದೆ. ಬಳಿಕ ನನಗೆ ಎಸ್​.ಪಿ. ಬಾಲಸುಬ್ರಮಣ್ಯಂರ ಪರಿಚಯವಾಯ್ತು. ಬಳಿಕ ಅವರ ಜೊತೆ ನನ್ನ ಬೆಸುಗೆ ಬಲವಾಯ್ತು ಅಂತಾ ಹಳೆಯ ನೆನಪುಗಳನ್ನ ವಿಘ್ನೇಶ್ವರ್​ ಮೆಲಕು ಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...