alex Certify ಪ್ರಮೋಷನ್​ ನೀಡಿಲ್ಲ ಎಂಬ ಕಾರಣಕ್ಕೆ ಹಿರಿಯ ಅಧಿಕಾರಿ ಕೊಲೆಗೆ ಸುಪಾರಿ ಕೊಟ್ಟ ಟೆಕ್ಕಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮೋಷನ್​ ನೀಡಿಲ್ಲ ಎಂಬ ಕಾರಣಕ್ಕೆ ಹಿರಿಯ ಅಧಿಕಾರಿ ಕೊಲೆಗೆ ಸುಪಾರಿ ಕೊಟ್ಟ ಟೆಕ್ಕಿ……!

ಹಿರಿಯ ಅಧಿಕಾರಿಯನ್ನು ಕೊಲೆ ಮಾಡಲು ಇಬ್ಬರು ಕಿರಿಯ ಇಂಜಿನಿಯರ್​ಗಳು 20 ಲಕ್ಷ ರೂಪಾಯಿ ಸುಪಾರಿ ನೀಡಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ಉದ್ಯೋಗದಲ್ಲಿ ಬಡ್ತಿ ನೀಡಿಲ್ಲ ಎಂಬ ಕಾರಣಕ್ಕೆ ಇವರಿಬ್ಬರು ಹಿರಿಯ ಅಧಿಕಾರಿಯನ್ನು ಕೊಲೆ ಮಾಡಲು ಪ್ಲಾನ್​ ಮಾಡಿದ್ದರು ಎನ್ನಲಾಗಿದೆ.

ಪ್ಲಾನ್​ ಪ್ರಕಾರ ಮಿರಾ- ಭಯಂದರ್​ನಿಂದ ಬೊರಿವಿಯಲ್ಲಿರುವ ನಿವಾಸಕ್ಕೆ ಹಿರಿಯ ಅಧಿಕಾರಿ ವಾಪಸ್ಸಾಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಹಂತಕರು ಫೈರಿಂಗ್​ ನಡೆಸಿದ್ದರು. ಆದರೆ ಮಿಸ್​ ಫೈರಿಂಗ್​ ಆದ ಕಾರಣ ಹಿರಿಯ ಅಧಿಕಾರಿ ಬಚಾವಾಗಿದ್ದಾರೆ.

ರೇಪ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಯೋಗ ಶಿಕ್ಷಕನಿಂದ ಪದೇ ಪದೇ ಅತ್ಯಾಚಾರ

ಆದರೂ ಹಿರಿಯ ಅಧಿಕಾರಿಗೆ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದೆ. ಮಿರಾ- ಭಯಂದರ್​ ಮುನ್ಸಿಪಲ್​ ಕಾರ್ಪೋರೇಷನ್​ನಲ್ಲಿ ಇಂಜಿನಿಯರ್​ಗಳಾಗಿದ್ದ ಶ್ರೀಕೃಷ್ಣ ಮೊಹಿತೆ ಹಾಗೂ ಯಶವಂತ್​ ರಾವ್​ ದೇಶ್​ಮುಖ್​ ಈ ಕೊಲೆಗೆ ಸುಪಾರಿ ನೀಡಿದವರು ಎನ್ನಲಾಗಿದೆ.

ಹಿರಿಯ ಅಧಿಕಾರಿಯು ನೆಗೆಟಿವ್​ ರಿಪೋರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರ ಬಡ್ತಿಯು ರದ್ದಾಗಿತ್ತು. ಇದರಿಂದ ಕೋಪಗೊಂಡಿದ್ದ ಶ್ರೀಕೃಷ್ಣ ಹಾಗೂ ಯಶವಂತ್​​ ರಾಜು ವಿಶ್ವಕರ್ಮ ಎಂಬವನಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

ಕೇವಲ1 ಗಂಟೆಯಲ್ಲೇ 25 ಸಾವಿರ ಮಹೀಂದ್ರಾ XUV700 ಬುಕ್ಕಿಂಗ್​…..!

ಆರು ತಿಂಗಳಿನಿಂದ ಈ ಕೊಲೆಗೆ ಪ್ಲಾನ್​ ನಡೆಯುತ್ತಲೇ ಇತ್ತು. ಕಳೆದ ತಿಂಗಳು ಶ್ರೀಕೃಷ್ಣ ಹಣವನ್ನೂ ನೀಡಿದ್ದ. ಇದಾದ ಬಳಿಕ ವಿಶ್ವಕರ್ಮ ಶೂಟರ್​ ಅಜಯ್​ ಸಿಂಗ್​ನನ್ನು ಸಂಪರ್ಕಿಸಿದ್ದ. ಸೆಪ್ಟೆಂಬರ್​ 29ರಂದು ಅಧಿಕಾರಿಯ ಮೇಲೆ ಫೈರಿಂಗ್​ ನಡೆದಿತ್ತು. ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧೆಡೆ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ಮಾಡಿದ್ದರು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸಿಂಗ್​ನ್ನು ಘಾಜಿಪುರದಲ್ಲಿ ಬಂಧಿಸಲಾಗಿದೆ. ಇದಾದ ಬಳಿಕ ಸಿಂಗ್​ ಸಂಪೂರ್ಣ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...