alex Certify ಸಲಿಂಗಕಾಮಿ ಎಂಬ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಿಂಗಕಾಮಿ ಎಂಬ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದ ಪುತ್ರ

ತಂದೆ ಸಲಿಂಗಕಾಮಿ ಎಂದು ತಿಳಿದ ಹಿನ್ನೆಲೆಯಲ್ಲಿ ಪುತ್ರನೇ ತಂದೆಯನ್ನು ಕೊಲೆಗೈದ ಆರೋಪದಡಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಕಟೌಲಿ ಎಂಬಲ್ಲಿ ನಡೆದಿದೆ.

ಪೊಲೀಸ್​ ವಿಚಾರಣೆಯ ವೇಳೆ ಆರೋಪಿ ಸುಮಿತ್​ ಕುಮಾರ್​ ತಂದೆಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ತಂದೆಯು ಬೇರೊಬ್ಬ ಪುರುಷನ ಜೊತೆ ಸಂಬಂಧ ಹೊಂದಿದ್ದನು. ಇದರಿಂದ ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ಬರಲಿದೆ ಎಂಬ ಕಾರಣಕ್ಕೆ ಕೊಲೆಗೈದಿದ್ದಾಗಿ ಹೇಳಿದ್ದಾನೆ.

ಇದು ಮಾತ್ರವಲ್ಲದೇ ತಂದೆಯು ತಾನು ಅಕ್ರಮ ಸಂಬಂಧ ಹೊಂದಿದ್ದ ಪುರುಷನಿಗೆ ತನ್ನ ಆಸ್ತಿಯನ್ನು ನೀಡಲು ಮುಂದಾಗಿದ್ದರು ಎಂದೂ ಆರೋಪಿ ಹೇಳಿದ್ದಾನೆ.

ರೇಶ್​ಪಾಲ್​ ಎಂಬವರ ಮೃತದೇಹವು ಆಗಸ್ಟ್​ 18ರಂದು ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಬಳಿಕ ಪುತ್ರ ಮೂವರ ವಿರುದ್ಧ ದೂರನ್ನು ದಾಖಲಿಸಿದ್ದನು. ಆದರೆ ವಿಚಾರಣೆ ವೇಳೆಯಲ್ಲಿ ಪುತ್ರನೇ ತಂದೆಯನ್ನು ಕೊಲೆಗೈದಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...