alex Certify ಪಿಜ್ಜಾ ಕೊಡಿಸಲು ತಡ ಮಾಡಿದ್ದ ತಾಯಿ; ನೇಣಿಗೆ ಕೊರಳೊಡ್ಡಿದ ಪುತ್ರಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಜ್ಜಾ ಕೊಡಿಸಲು ತಡ ಮಾಡಿದ್ದ ತಾಯಿ; ನೇಣಿಗೆ ಕೊರಳೊಡ್ಡಿದ ಪುತ್ರಿ……!

ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಕ್ಷುಲ್ಲಕ ಕಾರಣಕ್ಕೆ ನರ್ಸಿಂಗ್​ ವಿದ್ಯಾರ್ಥಿನಿ ತನ್ನ ಜೀವವನ್ನೇ ತೆತ್ತಿದ್ದಾಳೆ. ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ ಕಾರಣಕ್ಕೆ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ

ತಾಲಬ್​ಪುರ ಪ್ರದೇಶದ ನಿವಾಸಿಯಾದ 18 ವರ್ಷದ ಶಿಖಾ ಸೋನಿ ಎಂಬಾಕೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಿಖಾ ತನಗೆ ಪಿಜ್ಜಾ ಬೇಕೆಂದು ತಾಯಿಯ ಬಳಿ ಡಿಮ್ಯಾಂಡ್​ ಮಾಡಿದ್ದಳು. ತಾಯಿಯು ಪಿಜ್ಜಾ ಬೇಕೆಂದರೆ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಶಿಖಾ ತನ್ನ ಕೋಣೆಗೆ ತೆರಳಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯ ಮೂಲಕ ತಿಳಿದುಬಂದಿದೆ.

ʼರೆಸ್ಟೋರೆಂಟ್‌ʼಗಳಲ್ಲಿ ಪಾತ್ರೆ ತೊಳೆದಿದ್ದರಂತೆ ರತನ್ ಟಾಟಾ…!

ಮೃತ ಶಿಖಾ ತಂದೆ ಮೋಹನ್​ ಲಾಲ್​ ಈ ವಿಚಾರವಾಗಿ ಮಾತನಾಡಿದ್ದು, ನನ್ನ ಪುತ್ರಿ ನರ್ಸಿಂಗ್​ ಕೋರ್ಸ್ ಅಭ್ಯಾಸ ಮಾಡುತ್ತಿದ್ದಳು. ಜಿಲ್ಲಾಸ್ಪತ್ರೆಯಲ್ಲಿ ಮೂರು ತಿಂಗಳ ತರಬೇತಿಯನ್ನು ಪಡೆಯುತ್ತಿದ್ದಳು. ತಾಯಿಯ ಬಳಿ ಪಿಜ್ಜಾಗೆ ಬೇಡಿಕೆ ಇಟ್ಟಿದ್ದ ವೇಳೆ ತಾಯಿ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದರು. ಇಷ್ಟಕ್ಕೆ ಸಿಟ್ಟಾಗಿದ್ದ ಶಿಖಾ ಕೂಡಲೇ ತನ್ನ ಕೋಣೆಗೆ ತೆರಳಿದ್ದಳು. ಎಷ್ಟು ಹೊತ್ತಾದರೂ ಶಿಖಾ ಕೋಣೆಯಿಂದ ಹೊರಗೆ ಬರಲೇ ಇಲ್ಲ. ಕೋಣೆಯ ಬಾಗಿಲು ತೆಗೆದು ನೋಡಿದ ವೇಳೆ ಆಕೆ ನಮಗೆ ಶವವಾಗಿ ಪತ್ತೆಯಾಗಿದ್ದಳು. ಎರಡು ದಿನಗಳ ಹಿಂದೆಯಷ್ಟೇ ಈಕೆಯ ಜನ್ಮದಿನವನ್ನೂ ಆಚರಿಸಿದ್ದೆವು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...