alex Certify BREAKING: ಜನಾಶೀರ್ವಾದ ಯಾತ್ರೆ ವೇಳೆ ಅವಘಡ, ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜನಾಶೀರ್ವಾದ ಯಾತ್ರೆ ವೇಳೆ ಅವಘಡ, ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಗಾಯ

ವಿಜಯವಾಡ: ಕೇಂದ್ರ ಸಚಿವ ಕಿಶನ್ ರೆಡ್ಡಿ ತಲೆಗೆ ಗಾಯವಾದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ಗುರುವಾರ ಅವರು ವಿಜಯವಾಡಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಹೊರಟಿದ್ದ ವೇಳೆ ಕಾರ್ ನ ಡೋರ್ ಅವರ ತಲೆಗೆ ಬಡಿದಿದೆ. ಇದರಿಂದಾಗಿ ಅವರಿಗೆ ರಕ್ತಗಾಯವಾಗಿದೆ. ಕಾರ್ ಹತ್ತುವ ಸಂದರ್ಭದಲ್ಲಿ ಡೋರ್ ತಲೆಗೆ ತಾಗಿ ರೆಡ್ಡಿ ತಲೆಗೆ ಗಾಯವಾಗಿದ್ದು, ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

ಬೆಳಗ್ಗೆ ತಿರುಮಲಕ್ಕೆ ತೆರಳಿ ದೇವರ ದರ್ಶನ ಪಡೆದ ಅವರು ವಿಜಯವಾಡದಲ್ಲಿ ಜನಾಶೀರ್ವಾದ ಸಭೆ ಮುಗಿಸಿಕೊಂಡು ಹೊರಡುವಾಗ ಘಟನೆ ನಡೆದಿದೆ. ಚಿಕಿತ್ಸೆ ಪಡೆದು ಅವರು ಪ್ರಯಾಣ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...