alex Certify BREAKING: ದನ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರು ಪಾಲು; ಇಬ್ಬರು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ದನ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರು ಪಾಲು; ಇಬ್ಬರು ಪಾರು

ಗದಗ: ದನ ತೊಳೆಯಲು ನದಿಗೆ ಇಳಿದ ನಾಲ್ವರ ಪೈಕಿ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಗದಗ ಜಿಲ್ಲೆಯ ರಹೀಮತ್ ನಗರದಲ್ಲಿ ನಡೆದಿದೆ.

ಇಬ್ಬರು ಬಾಲಕರು ನೀರು ಪಾಲಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್ ಕುಂಬಾರ್ (14) ಹಾಗೂ ಮೊಹಮ್ಮದ್ ಅಮನ್ (12) ಮೃತ ಬಾಲಕರು.

ಮೊಹಮ್ಮದ್ ಆದಿಲ್ (14) ಹಾಗೂ ಶಾಹಿನ್ ಹುಬ್ಬಳ್ಳಿ(30) ಬಚಾವ್ ಆಗಿದ್ದಾರೆ. ನೀರುಪಾಲಾದ ಬಾಲಕರಿಗಾಗಿ ಅಗ್ನಿಶಾಮಕ ಸಿಬ್ಬದಿಗಳು ಶೋಧ ನಡೆಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...