alex Certify ಬಿಜೆಪಿ ನಾಯಕರ ಕಿತ್ತಾಟಕ್ಕೆ ಬಡವಾಯ್ತು ಬಿಹಾರ ಕ್ರಿಕೆಟ್​ ಬೋರ್ಡ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ನಾಯಕರ ಕಿತ್ತಾಟಕ್ಕೆ ಬಡವಾಯ್ತು ಬಿಹಾರ ಕ್ರಿಕೆಟ್​ ಬೋರ್ಡ್..!

ಮುಂಬರುವ ವಿನು ಮಂಕಡ್​ ಟ್ರೋಫಿ ಪಂದ್ಯಾವಳಿಗೆ ಬಿಸಿಸಿಐ ತಯಾರಿ ನಡೆಸುತ್ತಿದೆ. ಆದರೆ ಬಿಹಾರ ಕ್ರಿಕೆಟ್​ ಅಸೋಸಿಯೇಷನ್​​ ಸಂಸ್ಥೆಯು ಇಬ್ಬರು ಬಿಜೆಪಿ ನಾಯಕರ ಜಗಳದಲ್ಲಿ ಸಿಲುಕಿ ಒದ್ದಾಡುತ್ತಿದೆ.

ಕಳೆದ ಕೆಲ ವಾರಗಳಿಂದ ಎರಡು ಅಂಡರ್​ 19 ಕ್ರಿಕೆಟ್​ ತಂಡವನ್ನು ಬಿಹಾರದ ಇಬ್ಬರು ಬಿಜೆಪಿ ನಾಯಕರು ಮುನ್ನಡೆಸುತ್ತಿದ್ದಾರೆ. ಇಬ್ಬರೂ ತಮ್ಮನ್ನು ತಾವು ಬಿಸಿಎ ಅಧ್ಯಕ್ಷ ಎಂದು ಹೇಳಿಕೊಳ್ತಿದ್ದಾರೆ.

ಬಿಹಾರ ಬಿಜೆಪಿ ಮಾಜಿ ಖಜಾಂಚಿ ಹಾಗೂ ಬಿಸಿಎ ಅಧ್ಯಕ್ಷ ರಾಕೇಶ್​ ತಿವಾರಿ ಹಾಗೂ ಮಾಜಿ ಶಾಸಕ ಮತ್ತು ಬಿಜೆಪಿ ವಕ್ತಾರ ಪ್ರೇಮ್​ ರಂಜನ್​ ಪಟೇಲ್​ರ ನಡುವಿನ ಈ ಮುಸುಕಿನ ಗುದ್ದಾಟದಿಂದಾಗಿ ಬಿಹಾರ ಅಂಡರ್​ 19 ತಂಡ ಇದೀಗ 2 ಭಾಗವಾಗಿದೆ.

ಕಳೆದ ಬಿಸಿಸಿಐ ಎಜಿಎಂಗೆ ಹಾಜರಾಗಿದ್ದ ತಿವಾರಿ ಅಂಡರ್​ 19 ತಂಡಕ್ಕೆ 135 ಆಟಗಾರರನ್ನು ಶಾರ್ಟ್​ ಲಿಸ್ಟ್​ ಮಾಡಿರೋದಾಗಿ ಹೇಳಿದ್ದಾರೆ. ಸೆಪ್ಟೆಂಬರ್​ 14ರಂದು ಕ್ಯಾಂಬರ್​ ಮುಗಿದ ಬಳಿಕ ಪಟ್ಟಿ ಬಿಡುಗಡೆ ಮಾಡೋದಾಗಿ ಹೇಳ್ತಿದ್ದಾರೆ. ಆದರೆ ಈ ನಡುವೆ ಪಟೇಲ್​ ನೇತೃತ್ವದ ಬಂಡಾಯ ಗುಂಪು ಈಗಾಗಲೇ ಬಿಹಾರ ಅಂಡರ್​ 19 ತಂಡದ ಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದೆ.

ಪಟೇಲ್​ ಆಯ್ಕೆ ಮಾಡಿರುವ ಆಟಗಾರರು ಬಿಸಿಎನಲ್ಲಿ ಹೆಸರು ನೋಂದಾಯಿಸಿಲ್ಲ ಎಂದು ತಿವಾರಿ ಹೇಳಿದ್ದಾರೆ.

ಅವರು ಯಾರೆಂದೂ ಗೊತ್ತಿಲ್ಲ, ಅವರಿಗೆ ಯಾವುದೇ ಕಚೇರಿಯಿಲ್ಲ, ಅಧಿಕೃತ ಇ ಮೇಲ್​ ಕೂಡ ಇಲ್ಲ. ಅವರ ಚುನಾವಣೆ ಯಾವಾಗ ನಡೆಯಿತು..? ಅವರ ಸದಸ್ಯರು ಯಾರು..? ಕೆಲವರಿಗೆ ಗೊಂದಲ ಸೃಷ್ಟಿಸುವುದೇ ಒಂದು ಕೆಲಸ ಎಂದು ತಿವಾರಿ ಆಕ್ರೋಶ ಹೊರ ಹಾಕಿದ್ದಾರೆ.

ತನ್ನನ್ನು ತಾನು ಬಿಸಿಎ ಅಧ್ಯಕ್ಷ ಎಂದು ಹೇಳಿಕೊಂಡಿರುವ ಪಟೇಲ್​, ಕಳೆದ ವರ್ಷ ತುರ್ತು ಸಭೆಯೊಂದನ್ನು ಕರೆಯಲಾಗಿತ್ತು, ಆಗ ತಿವಾರಿಯನ್ನು ಬಿಸಿಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 38 ಜಿಲ್ಲೆಗಳ ಪೈಕಿ 28 ಜಿಲ್ಲೆಗಳ ಅಸೋಸಿಯೇಷನ್​ ಈ ಸಭೆಯಲ್ಲಿ ಭಾಗಿಯಾಗಿತ್ತು ಹಾಗೂ ನನ್ನನ್ನು ಬಿಸಿಎ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದರು ಎಂದು ಹೇಳಿದ್ದಾರೆ.

ಈ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಸಿಂಗ್​, ಈ ಬಗ್ಗೆ ಬೋರ್ಡ್​ ಮೇಲ್ವಿಚಾರಣೆ ನಡೆಸಲಿದೆ. ಒಂದೇ ರಾಜ್ಯದಿಂದ ಎರಡು ತಂಡಗಳ ಆಯ್ಕೆಯನ್ನು ಬಿಸಿಸಿಐ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...