alex Certify BIG NEWS: ಚಿತ್ರದುರ್ಗದ ಬಳಿಕ ತುಮಕೂರಿನ ಕೆರೆಯಲ್ಲಿಯೂ ಅಸ್ಥಿಪಂಜರ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಿತ್ರದುರ್ಗದ ಬಳಿಕ ತುಮಕೂರಿನ ಕೆರೆಯಲ್ಲಿಯೂ ಅಸ್ಥಿಪಂಜರ ಪತ್ತೆ

ತುಮಕೂರು: ಚಿತ್ರದುರ್ಗದ ಮನೆಯೊಂದರಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬೆನ್ನಲ್ಲೇ ಇದೀಗ ತುಮಕೂರಿನಲ್ಲಿ ಕುಣಿಗಲ್ ನಲ್ಲಿಯೂ ಅಸ್ಥಿಪಂಜರ ಪತ್ತೆಯಾಗಿದೆ.

ಕುಣಿಗಲ್ ನ ಕಿತ್ತಾನಮಂಗಲ ಕೆರೆಯಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದ್ದು, ಅಸ್ಥಿಪಂಜರದ ಜೊತೆಗೆ ಬೆಳ್ಳಿ ಕಾಲ್ಗೆಜ್ಜೆ, ಕೈ ಬಳೆಗಳು, ನೈಟಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇದು ಮಹಿಳೆಯೊಬ್ಬರ ಅಸ್ಥಿಪಂಜರ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 6 ತಿಂಗಳ ಹಿಂದೆ ಕಲ್ಲಿಪಾಳ್ಯ ಗ್ರಾಮದ ರಂಜಿತಾ ಎಂಬ ಮಹಿಳೆ ನಾಪತ್ತೆಯಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಈವರೆಗೂ ಅವರ ಸುಳಿವು ಇರಲಿಲ್ಲ. ಈಗ ಕೆರೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರ ಅವರದ್ದೇ ಇರಬಹುದು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಣಿಗಲ್ ಪೊಲೀಸರು ತನಿಖೆ ನಡೆಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...