alex Certify ಬರೋಬ್ಬರಿ 20 ವರ್ಷಗಳ ಬಳಿಕ ಡಿಸಿಸಿ ಬ್ಯಾಂಕ್​ ವಂಚಕರಿಗೆ ಶಿಕ್ಷೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 20 ವರ್ಷಗಳ ಬಳಿಕ ಡಿಸಿಸಿ ಬ್ಯಾಂಕ್​ ವಂಚಕರಿಗೆ ಶಿಕ್ಷೆ…..!

ಬರೋಬ್ಬರಿ 20 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ತುಮಕೂರು ಡಿಸಿಸಿ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಡಿಸಿಸಿ ಬ್ಯಾಂಕ್​ ನೌಕರ ಅಶ್ವತ್ಥ ನಾರಾಯಣಗೆ 9 ವರ್ಷ, ಗ್ರಾಹಕರಾದ ಶಾಂತಲಕ್ಷ್ಮಮ್ಮ ಹಾಗೂ ಬಶೀರ್​​ಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಶೀರ್​ ಅಹಮದ್​​ ಆದೇಶ ಹೊರಡಿಸಿದ್ದಾರೆ.

1999ರಲ್ಲಿ ಡಿಸಿಸಿ ಬ್ಯಾಂಕ್​​ನಲ್ಲಿ ಡಿಡಿ ಬುಕ್​ ಕಳವು ಮಾಡುವ ಮೂಲಕ ಈ ಮೂವರು ಬ್ಯಾಂಕ್​ಗೆ ಬರೋಬ್ಬರಿ 34.85 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ಡಿಸಿಸಿ ಬ್ಯಾಂಕ್​ನಲ್ಲಿ ಡಿಡಿ ಪುಸ್ತಕ ವಿತರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಶ್ವತ್ಥ ನಾರಾಯಣ ಡಿಡಿ ಪುಸ್ತಕ ಕಳವು ಮಾಡಿ ಶಾಂತ ಲಕ್ಷ್ಮಮ್ಮ ಹಾಗೂ ಬಶೀರ್​ಗೆ 34.85 ಲಕ್ಷ ರೂಪಾಯಿ ನೀಡಿದ್ದರು. ಪ್ರಕರಣ ಸಂಬಂಧ 2001ರಲ್ಲಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದರು.

ಸುದೀರ್ಘ 20 ವರ್ಷಗಳ ಕಾಲ ನಡೆದಿದ್ದ ವಾದ ವಿವಾದದಲ್ಲಿ ಕೊನೆಗೂ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...