alex Certify BIG NEWS: 6 ಜನರ ಬಲಿ ಪಡೆದ ಪಳವಳ್ಳಿ ಬಸ್ ದುರಂತಕ್ಕೆ ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 6 ಜನರ ಬಲಿ ಪಡೆದ ಪಳವಳ್ಳಿ ಬಸ್ ದುರಂತಕ್ಕೆ ಕಾರಣವೇನು ಗೊತ್ತಾ…?

ಬೆಂಗಳೂರು: ತುಮಕೂರು ಜಿಲ್ಲೆ ಪಳವಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಸಂಭವಿಸಿದ ದುರಂತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಬಸ್ ಚಾಲಕನ ನಿರ್ಲಕ್ಷದ ಚಾಲನೆಯೇ ಕಾರಣವಾಗಿದೆ. ಚಾಲಕ ತಿರುವಿನಲ್ಲಿಯೂ ಅತಿ ವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ, ಪ್ರಯಾಣಿಕರು ಎಚ್ಚರಿಸಿ ಸೂಚನೆ ನೀಡಿದರೂ ಚಾಲಕ ನಿರ್ಲಕ್ಷ ತೋರಿದ್ದಾನೆ.

ಇನ್ನು ಆ ಮಾರ್ಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇರಲಿಲ್ಲ. ವೈಎನ್ ಹೊಸಕೋಟೆ ಪೊಲೀಸರು ಎರಡು ಬಸ್ ಗಳನ್ನು ಸೀಜ್ ಮಾಡಿದ್ದರು. ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಬಸ್ ಗಳನ್ನು ಸೀಜ್ ಮಾಡಲಾಗಿತ್ತು. ಇದರಿಂದಾಗಿ ಆ ಮಾರ್ಗದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇರಲಿಲ್ಲ.

ಪಳವಳ್ಳಿ ಕಟ್ಟೆಯ ಮೇಲೆ ಪದೇ ಪದೇ ಅಪಘಾತಗಳು ಆಗುತ್ತಿದ್ದರೂ, ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಅಪಘಾತ ವಲಯವಾಗಿದ್ದರೂ ಸೂಚನಾ ಫಲಕ ಅಳವಡಿಸಿರಲಿಲ್ಲ. ವೇಗ ನಿಯಂತ್ರಣಕ್ಕೆ ರೋಡ್ ಹಂಪ್ಸ್ ಕೂಡ ಹಾಕಿರಲಿಲ್ಲ. ಈ ಮಾರ್ಗದಲ್ಲಿ ಸೂಕ್ತ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲವಾಗಿದ್ದು, ಇರುವ ಒಂದೆರಡು ಖಾಸಗಿ ಬಸ್ ಗಳಲ್ಲಿ ಸಂಚರಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...