alex Certify BIG NEWS: ಬೆಂಕಿ ದುರಂತ; 200 ಕೋಳಿ, 50 ಕುರಿ, 6 ಹಸು ಸಜೀವದಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಕಿ ದುರಂತ; 200 ಕೋಳಿ, 50 ಕುರಿ, 6 ಹಸು ಸಜೀವದಹನ

ತುಮಕೂರು: ಆಕಸ್ಮಿಕ ಬೆಂಕಿ ದುರಂತದಲ್ಲಿ 200 ಕೋಳಿ, 50 ಕುರಿ, 6 ಹಸು ಸಜೀವದಹನಗೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮಘಟ್ಟ ಬಳಿ ನಡೆದಿದೆ.

ಬೆಂಕಿ ಅವಘಡಕ್ಕೆ ಕೊಟ್ಟಿಗೆಯಲ್ಲಿಯೇ ಹಸು, ಕುರಿ, ಕೋಳಿಗಳು ಸಜೀವದಹನಗೊಂಡಿವೆ. ರೈತ ಚೇತನ್ ಕುಮಾರ್ ಎಂಬುವವರಿಗೆ ಸೇರಿದ ಹಸು, ಕುರಿ, ಕೋಳಿಗಳಾಗಿದ್ದು, ಕೊಟ್ಟಿಗೆಯಲ್ಲಿಯೇ ಸುಟ್ಟು ಕರಕಲಾಗಿವೆ.

ದನಗಳ ಸಾವು ಕಂಡು ರೈತ ಚೇತನ್ ಕಂಗಾಲಾಗಿದ್ದಾರೆ. ತಡರಾತ್ರಿ ಈ ದುರಂತ ಸಂಭವಿಸಿದ್ದು, ಈವರೆಗೂ ಸ್ಥಳಕ್ಕೆ ಯಾವುದೇ ತಹಶ್ಲೀಲ್ದಾರ್, ಪಿಡಿಒ, ಪಶು ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...