alex Certify ಭಕ್ತಾದಿಗಳ ಆರೋಗ್ಯ ಕಾಪಾಡಲು ಹೊಸ ಯೋಜನೆ ರೂಪಿಸಿದ ತಿರುಮಲ ತಿರುಪತಿ ಆಡಳಿತ ಮಂಡಳಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತಾದಿಗಳ ಆರೋಗ್ಯ ಕಾಪಾಡಲು ಹೊಸ ಯೋಜನೆ ರೂಪಿಸಿದ ತಿರುಮಲ ತಿರುಪತಿ ಆಡಳಿತ ಮಂಡಳಿ….!

ಭಕ್ತರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಉದ್ದೇಶದಿಂದ ತಿರುಮಲ ತಿರುಪತಿ ಆಡಳಿತ ಮಂಡಳಿಯು ಕ್ಯಾಂಟೀನ್​ ತೆರೆಯಲು ಉದ್ದೇಶಿಸಿದೆ. ಈ ಕ್ಯಾಂಟೀನ್​​ನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಆರ್ಗಾನಿಕ್​ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ.

ಟಿಟಿಡಿಗೆ ಸೇರಿದ ಎಸ್​ವಿ ಗೆಸ್ಟ್​ ಹೌಸ್​ ಹಾಗೂ ಎಸ್​ವಿ ಕ್ಯಾಂಟೀನ್​ ಮಾದರಿಯಲ್ಲೇ ಈ ಕ್ಯಾಂಟೀನ್​ನ್ನು ತೆರೆಯಲು ಯೋಚಿಸಲಾಗಿದೆ. ಯಾವುದೇ ಲಾಭ – ನಷ್ಟವಿಲ್ಲದೇ ಈ ಕ್ಯಾಂಟೀನ್​​ನ್ನು ತೆರೆಯಲು ಟಿಟಿಡಿ ಯೋಜನೆ ರೂಪಿಸಿದೆ.

ಸಂಪೂರ್ಣ ನೈರ್ಮಲ್ಯದಿಂದಿರುವ ಅಡುಗೆ ಮನೆಯಲ್ಲಿ ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿಯ ಭೋಜನವನ್ನು ತಯಾರು ಮಾಡಲಾಗುತ್ತದೆ. ಇದನ್ನು ದೇಗುಲದ ದರ್ಶನಕ್ಕೆ ಬಂದ ಯಾತ್ರಾರ್ಥಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...