alex Certify ಭಯಾನಕ ಸಂಗತಿ ಹೇಳಿದ ಪುತ್ರ; ಪತ್ನಿಯಿಂದಲೇ ಪತಿಯ ಶಿರಚ್ಛೇದ; ಗಂಡನ ರಕ್ತಸಿಕ್ತ ತಲೆ ಕೈಯಲ್ಲಿ ಹಿಡಿದುಕೊಂಡು ದೇವಾಲಯಕ್ಕೆ ಬಂದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಾನಕ ಸಂಗತಿ ಹೇಳಿದ ಪುತ್ರ; ಪತ್ನಿಯಿಂದಲೇ ಪತಿಯ ಶಿರಚ್ಛೇದ; ಗಂಡನ ರಕ್ತಸಿಕ್ತ ತಲೆ ಕೈಯಲ್ಲಿ ಹಿಡಿದುಕೊಂಡು ದೇವಾಲಯಕ್ಕೆ ಬಂದ ಮಹಿಳೆ

ಅಗರ್ತಲಾ: ತ್ರಿಪುರಾದ ಖೋವೈ ಜಿಲ್ಲೆಯಲ್ಲಿ ಗಂಡನ ಶಿರಚ್ಛೇದ ಮಾಡಿದ ಮಹಿಳೆ, ರಕ್ತ ತೊಯ್ದ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ದೇವಸ್ಥಾನದಲ್ಲಿ ಕುಳಿತುಕೊಂಡ ಘಟನೆ ನಡೆದಿದೆ.

ಶನಿವಾರ ಬೆಳ್ಳಂಬೆಳಗ್ಗೆ ಮಹಿಳೆ ತನ್ನ 50 ವರ್ಷದ ಗಂಡನ ಶಿರಚ್ಛೇದ ಮಾಡಿ ರಕ್ತದಿಂದ ತೊಯ್ದ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಕುಟುಂಬದ ದೇವಸ್ಥಾನದಲ್ಲಿ ಕುಳಿತಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಖೋವಾಯ್ ಪೊಲೀಸ್ ವರಿಷ್ಠಾಧಿಕಾರಿ ಭಾನುಪಾದ ಚಕ್ರವರ್ತಿ ಹೇಳಿದ್ದಾರೆ.

ತಾಯಿ ಇತ್ತೀಚೆಗೆ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದು, ಸ್ಥಳೀಯ ತಜ್ಞರಿಂದ ಚಿಕಿತ್ಸೆ ಪಡೆದಿದ್ದಾರೆ ಎಂದು ದಂಪತಿಯ ಹಿರಿಯ ಮಗ ಹೇಳಿದ್ದಾನೆ.

42 ವರ್ಷದ ಮಹಿಳೆಯನ್ನು ಜಿಲ್ಲೆಯ ಇಂದಿರಾ ಕಾಲೋನಿ ಗ್ರಾಮದ ಅವರ ನಿವಾಸದಿಂದ ಬಂಧಿಸಲಾಗಿದೆ. ಅವಳು ತನ್ನ ಪತಿ ರವೀಂದ್ರ ತಂತಿ ಮತ್ತು ಇಬ್ಬರು ಅಪ್ರಾಪ್ತ ಪುತ್ರರೊಂದಿಗೆ ಅಲ್ಲಿ ವಾಸಿಸುತ್ತಿದ್ದಳು.

ನನ್ನ ತಾಯಿ ಯಾವಾಗಲೂ ಸಸ್ಯಾಹಾರಿಯಾಗಿದ್ದರು. ಆದರೆ ಅವಳು ನಿನ್ನೆ ರಾತ್ರಿ ಚಿಕನ್ ಸೇವಿಸಿದ್ದರು. ರಾತ್ರಿ ನಾವೆಲ್ಲರೂ ಮಲಗಲು ಹೋದೆವು. ಇದ್ದಕ್ಕಿದ್ದಂತೆ ನಾನು ಎಚ್ಚರಗೊಂಡು ನನ್ನ ತಂದೆಯ ಶಿರಚ್ಛೇದ ಆಗಿರುವುದನ್ನು ನೋಡಿದೆ. ನನ್ನ ತಾಯಿ ರಕ್ತದಿಂದ ತೊಯ್ದ ದಾವೋ(ಒಂದು ಹರಿತವಾದ ಆಯುಧ) ನೊಂದಿಗೆ ನಿಂತಿದ್ದನ್ನು ನೋಡಿ ನನಗೆ ಆಘಾತವಾಯಿತು. ನಾವು ಕೂಗಿದಾದಾಗ, ಅವಳು ಕೋಣೆಯಿಂದ ಬಂದು ನನ್ನ ತಂದೆಯ ತಲೆಯನ್ನು ನಮ್ಮ ದೇವಸ್ಥಾನದಲ್ಲಿ ಇರಿಸಿದಳು ಎಂದು ಹಿರಿಯ ಮಗ ಭಯಾನಕ ಕಥೆಯನ್ನು ಬಿಚ್ಚಿಟ್ಟಿದ್ದಾನೆ.

ನಾವು ಶವವನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಮಹಿಳೆಯನ್ನು ಬಂಧಿಸಿದ್ದೇವೆ. ತನಿಖೆ ಆರಂಭವಾಗಿದೆ ಎಂದು ಎಸ್ಪಿ ತಿಳಿಸಿದರು. ಫೋರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...