alex Certify ’ಕೇಶಮುಂಡನ’ ಮಾಡಿಸಿಕೊಂಡು ಟಿಎಂಸಿ ಸೇರಿದ ಬಿಜೆಪಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಕೇಶಮುಂಡನ’ ಮಾಡಿಸಿಕೊಂಡು ಟಿಎಂಸಿ ಸೇರಿದ ಬಿಜೆಪಿ ಶಾಸಕ

Tripura BJP MLA Ashis Das gets 'mundan' done as 'prayaschit' before joining TMC | India News | Zee Newsತ್ರಿಪುರಾದ ಬಿಜೆಪಿ ಶಾಸಕ ಆಶಿಶ್ ದಾಸ್‌ ಕೋಲ್ಕತ್ತಾಗೆ ಆಗಮಿಸಿದ್ದು ಮಮತಾ ಬ್ಯಾನರ್ಜಿರ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಸೇರುವ ಮುನ್ನ ’ಆತ್ಮಶುದ್ಧಿಗಾಗಿ’ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ ಆಶಿಶ್.

ಹವನದ ಬಳಿಕ ಕೇಶ ಮುಂಡನ ಮಾಡಿಕೊಂಡ ಆಶಿಶ್, ಬಳಿಕ ಕಾಳಿಘಾಟ್‌ ಬಳಿ ಗಂಗಾ ನದಿಯಲ್ಲಿ ಮಿಂದೆದಿದ್ದಾರೆ. ಪ್ರಾಯಶ್ಚಿತ ಪಡಲು ತಾವು ಹೀಗೆ ಮಾಡುತ್ತಿರುವುದಾಗಿ ಆಶಿಶ್ ತಿಳಿಸಿದ್ದು, ಟಿಎಂಸಿ ಸೇರುವ ಮುನ್ನ ತಮ್ಮನ್ನು ’ಶುದ್ಧ’ ಮಾಡಿಕೊಳ್ಳಲು ಬಯಸಿದ್ದಾಗಿ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ; ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬಿಜೆಪಿ ಶಾಸಕರು ಹಾಗೂ ನಾಯಕರ ವಿರೋಧದ ನಡುವೆಯೂ ಆಶಿಶ್, ಮಮತಾ ಬ್ಯಾನರ್ಜಿರನ್ನು ಮೆಚ್ಚಿ ಮಾತನಾಡಿದ್ದು, ಭವಾನಿಪುರ ಕ್ಷೇತ್ರದಿಂದ ಭಾರೀ ಅಂತರದಲ್ಲಿ ಗೆದ್ದಿದ್ದಕ್ಕೆ ಅವರಿಗೆ ಶುಭಾಶಯವನ್ನೂ ತಿಳಿಸಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಆಶಿಶ್, “ನಾನು ತಿನ್ನುವುದಿಲ್ಲ ಹಾಗೂ ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿಯ ಮಾತುಗಳು ಈಗ ಜೋಕ್ ಆಗಿದೆ” ಎಂದಿದ್ದಾರೆ.

ನಿಮ್ಮ ಮಕ್ಕಳೂ ಜಾಣರಾಗಬೇಕಾ….? ಹಾಗಾದರೆ ಓದುವ ಕೋಣೆಯ ಬಗ್ಗೆ ನೀವು ತಿಳಿಯಲೇಬೇಕು ಈ ಅಂಶ….!

ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ ಎಂದು ಆಶಿಶ್ ಹೇಳಿಕೊಂಡಿದ್ದಾರೆ.

— Pooja Mehta (@pooja_news) October 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...