alex Certify ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದು ಚಿಕಿತ್ಸೆಗೆ ಬಂದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದು ಚಿಕಿತ್ಸೆಗೆ ಬಂದ ಭೂಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪೊಳಲಿ ಸಮೀಪ ಕೊಳತ್ತಮಜಲಿನಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವಿನೊಂದಿಗೆ ಚಿಕಿತ್ಸೆಗೆ ಬಂದ ಘಟನೆ ನಡೆದಿದೆ.

ಅರಳ ನಿವಾಸಿ ಹಾವು ಹಿಡಿಯಲು ಹೋದ ಸಂದರ್ಭದಲ್ಲಿ ನಾಗರಹಾವು ಕೈಗೆ ಕಚ್ಚಿದೆ. ಗಾಯವಾದರೂ ಛಲ ಬಿಡದ ಅವರು ತನಗೆ ಕಚ್ಚಿದ ಹಾವನ್ನು ಹಿಡಿದು ನಾಟಿ ವೈದ್ಯ ಜನಾರ್ಧನ ಹೆಚ್.ಎಸ್. ಕೊಳತ್ತಮಜಲು ಅವರ ಬಳಿಗೆ ಬಂದಿದ್ದಾರೆ. ವ್ಯಕ್ತಿಗೆ ಕಡಿದಿರುವುದು ನಾಗರಹಾವು ಎಂದು ಗೊತ್ತಾಗಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಗಾಯಾಳು ಚೇತರಿಸಿಕೊಂಡಿದ್ದಾರೆ. ಈ ವಿಚಾರ ಭಾರೀ ಚರ್ಚೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...