ಬೆಂಗಳೂರು: ಓಲಾ, ಊಬರ್ ಹಗಲು ದರೋಡೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಕ್ಯಾಬ್ ಕಂಪನಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಓಲಾ, ಊಬರ್, ರ್ಯಾಪಿಡೋ ಕಂಪನಿಗಳು ನೋಟೀಸ್ ಜಾರಿಯಾಗಿ ಮೂರು ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಆರ್ ಟಿಓ ಅಧಿಕಾರಿಗಳು ಓಲಾ, ಊಬರ್ ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಎಚ್ಚೆತ್ತ ಕಂಪನಿಗಳು ಸಾರಿಗೆ ಇಲಾಖೆ ನೋಟೀಸ್ ಗೆ ಉತ್ತರಿಸಿದ್ದು, ಇಲಾಖೆ ಜೊತೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತ ಟಿಹೆಚ್ ಎಂ ಕುಮಾರ್ ಮಾತುಕತೆಗೆ ಆಹ್ವಾನಿಸಿದ್ದು ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ಸಭೆ ನಡೆದಿದೆ. ಸಾರಿಗೆ ಇಲಾಖೆ ನಿಯಮ ಉಲ್ಲಂಘನೆ ಮಾಡಿ ಪ್ರಯಾಣಿಕರಿಂದ ದುಪ್ಪಟ್ಟು ಶುಲ್ಕ ವಿಧಿಸುತ್ತಿರುವ ಗಂಭೀರ ಆರೋಪ ಓಲಾ, ಊಬರ್, ರ್ಯಾಪಿಡೋ ಕಂಪಂನಿ ಕ್ಯಾಬ್, ಆಟೋಗಳ ವಿರುದ್ಧ ಕೇಳಿಬಂದಿದೆ.