ಬೆಂಗಳೂರು: ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ನಲ್ಲಿ ಹಾಲು ನೀಡಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಹಾಲಿನ ಪುಡಿ ನೀಡಲಾಗುತ್ತಿದ್ದು, ಟೆಟ್ರಾ ಪ್ಯಾಕ್ ನಲ್ಲಿ ಹಾಲು ವಿತರಿಸಲು ಸಿಎಂ ಜೊತೆಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಕೆಎಂಎಫ್ ಅಧಿಕಾರಿಗಳು ಪ್ರಸ್ತಾವನೆ ಮಂಡಿಸಿದ್ದಾರೆ.
ಕ್ಷೀರ ಭಾಗ್ಯ ಯೋಜನೆಯಡಿ ರಾಜ್ಯದ ಸರ್ಕಾರಿ ಆಗೋ ಅನುದಾನಿತ ಶಾಲೆ ಮಕ್ಕಳಿಗಾಗಿ ಹಾಲಿನ ಪುಡಿ ನೀಡಲಾಗುತ್ತಿದ್ದು, ಇದರ ಬದಲಿಗೆ ಟೆಟ್ರಾಪ್ಯಾಕ್ ನಲ್ಲಿ ಹಾಲು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು 3 ರಿಂದ 6 ತಿಂಗಳು ಸಂರಕ್ಷಿಸಬಹುದು. ಪುಡಿ ಹಾಲಿಗಿಂತ ಈ ಹಾಲು ಸುರಕ್ಷಿತವಾಗಿದ್ದು, ಸರಬರಾಜು ಮಾಡುವುದು ಸುಲಭ ಎಂದು ಹೇಳಲಾಗಿದೆ.
ಹಾಲು ಕುದಿಸಿದ ನಂತರ ಬ್ಯಾಕ್ಟೀರಿಯಾ ಮುಕ್ತವಾಗಿಸಿ ಟೆಟ್ರಾ ಪ್ಯಾಕ್ ನಲ್ಲಿ 200 ಮಿ.ಲೀ. ಹಾಲು ನೀಡುವುದರಿಂದ ಮಕ್ಕಳು ಶಾಲೆಯಲ್ಲಿ ಹಾಲು ಕುಡಿಯಬಹುದು ಅಥವಾ ಮನೆಗೆ ತೆಗೆದುಕೊಂಡು ಹೋಗಿ ಇಷ್ಟ ಬಂದಾಗ ಕುಡಿಯಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.