alex Certify ಭಾರತರತ್ನ ನನ್ನ ತಂದೆ ಕಾಲ್ಬೆರಳಿಗೆ ಸಮ ಎಂದ ಎನ್​ಟಿಆರ್​ ಪುತ್ರ: ನೆಟ್ಟಿಗರಿಂದ ಆಕ್ರೋಶ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತರತ್ನ ನನ್ನ ತಂದೆ ಕಾಲ್ಬೆರಳಿಗೆ ಸಮ ಎಂದ ಎನ್​ಟಿಆರ್​ ಪುತ್ರ: ನೆಟ್ಟಿಗರಿಂದ ಆಕ್ರೋಶ….!

Nandamuri Balakrishna gets trolled for saying he doesn't know who AR Rahman  is

ತೆಲಗು ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಸಂದರ್ಶನದ ಕೆಲ ವಿಡಿಯೋಗಳು ವೈರಲ್​ ಆಗಿದ್ದು ಸೋಶಿಯಲ್​​ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಂದರ್ಶನದಲ್ಲಿ ಬಾಲಕೃಷ್ಣ ಆಸ್ಕರ್​ ಪ್ರಶಸ್ತಿ ವಿಜೇತ ಎ.ಆರ್.​ ರೆಹಮಾನ್​ ತಮಗೆ ಯಾರೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವು ತಮ್ಮ ತಂದೆ ದಿವಂಗತ ಎನ್​ಟಿಆರ್​ರ ಕಾಲ್ಬೆರಳ ಉಗುರಿಗೆ ಸಮ ಎಂದು ಹೇಳಿದ್ದಾರೆ.

ಎ.ಆರ್.​ ರೆಹಮಾನ್​ ಎಂದರೆ ಯಾರೆಂದೂ ನನಗೆ ತಿಳಿದಿಲ್ಲ. ಅವರು ಆಸ್ಕರ್​ ಗೆದ್ದಿದ್ದಾರಂತೆ ಆದರೆ ನನಗೆ ಅವರು ಯಾರೆಂದು ತಿಳಿದಿಲ್ಲ. ಒಂದು ಕಾಲದಲ್ಲಿ ಅವರು ಹಿಟ್​ ಹಾಡುಗಳನ್ನ ಸಿನಿರಂಗಕ್ಕೆ ನೀಡುತ್ತಿದ್ದರು ಎಂದು ಟಿವಿ ಸಂದರ್ಶನವೊಂದರಲ್ಲಿ ಬಾಲಕೃಷ್ಣ ಹೇಳಿದ್ದಾರೆ.

ಇನ್ನು ಭಾರತ ರತ್ನದ ವಿಚಾರವಾಗಿಯೂ ಮಾತನಾಡಿದ ಬಾಲಕೃಷ್ಣ, ನನ್ನ ಪ್ರಕಾರ ಭಾರತ ರತ್ನ ಗೌರವವು ನನ್ನ ತಂದೆಯ ಕಾಲ್ಬೆರಳಿಗೆ ಸಮ. ನಮ್ಮ ಕುಟುಂಬವು ಟಾಲಿವುಡ್​ಗೆ ನೀಡಿರುವ ಕೊಡುಗೆಗೆ ಸರಿ ಸಮಾನವಾದ ಪ್ರಶಸ್ತಿ ಯಾವುದೂ ಇಲ್ಲ. ಹೀಗಾಗಿ ಪ್ರಶಸ್ತಿಗಳಿಗೆ ಬೇಸರವಾಗಬೇಕೆ ಹೊರತು ನನ್ನ ಕುಟುಂಬಕ್ಕಲ್ಲ ಎಂದು ಹೇಳಿದ್ದಾರೆ.

ಟ್ವಿಟರ್​ನಲ್ಲಿ ಸಂದರ್ಶನದ ವಿಡಿಯೋಗಳು ವೈರಲ್​ ಆಗುತ್ತಿದ್ದಂತೆಯೇ ಭಾರತೀಯ ನೆಟ್ಟಿಗರು ಗರಂ ಆಗಿದ್ದು #whoisbalakrishna ಎಂಬ ಹ್ಯಾಶ್​ಟ್ಯಾಗ್​ನ ಅಡಿಯಲ್ಲಿ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...