alex Certify BIG NEWS: ಇಂಥಹ ಘಟನೆಗಳು ತೆಲಂಗಾಣದಲ್ಲಿ ಯಾವತ್ತೂ ನಡೆಯಲ್ಲ; ಕರ್ನಾಟಕದಲ್ಲಿನ ಬೆಳವಣಿಗೆಗಳ ಬಗ್ಗೆ ಸಿಎಂ ಕೆಸಿಆರ್ ಟೀಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂಥಹ ಘಟನೆಗಳು ತೆಲಂಗಾಣದಲ್ಲಿ ಯಾವತ್ತೂ ನಡೆಯಲ್ಲ; ಕರ್ನಾಟಕದಲ್ಲಿನ ಬೆಳವಣಿಗೆಗಳ ಬಗ್ಗೆ ಸಿಎಂ ಕೆಸಿಆರ್ ಟೀಕೆ

ಹೈದರಾಬಾದ್: ಕರ್ನಾಟಕ ರಾಜಕಾರಣದಲ್ಲಿನ ಬೆಳವಣಿಗೆ, ಹಿಜಾಬ್ – ಹಲಾಲ್ ಸಂಘರ್ಷ ವಿಚಾರಗಳನ್ನು ಟೀಕಿಸಿರುವ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಇಂಥಹ ಘಟನೆಗಳು ತೆಲಂಗಾಣದಲ್ಲಿ ಎಂದೂ ನಡೆಯಲ್ಲ ಎಂದಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸೇರಿದಂತೆ ಅದಕ್ಕೂ ಮೊದಲು ನಡೆದ ಸಚಿವರೊಬ್ಬರ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಕೆ.ಸಿ.ಆರ್, ಕರ್ನಾಟಕದಲ್ಲಿ ಇತ್ತೀಚೆಗೆ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಅದಕ್ಕೆ ಕಾರಣವೇನು ಎಂಬುದನ್ನೂ ನಾವು ನೋಡಿದ್ದೇವೆ. ಆದರೆ ಇಂಥ ಘಟನೆಗಳು ನಮ್ಮ ರಾಜ್ಯದಲ್ಲಿ ನಡೆಯಲ್ಲ ಎಂದರು.

BIG NEWS: ಆಸಿಡ್ ದಾಳಿಗೊಳಗಾದ ಯುವತಿ ಸ್ಥಿತಿ ಗಂಭೀರ; ಆರೋಪಿ ಪತ್ತೆಗಾಗಿ ತೀವ್ರಗೊಂಡ ಶೋಧ

ಕರ್ನಾಟಕದಲ್ಲಿನ ಹಿಜಾಬ್, ಹಲಾಲ್ ವಿಚಾರವಾಗಿಯೂ ಬಿಜೆಪಿ ಸರ್ಕಾರ ಟೀಕಿಸಿರುವ ಕೆ.ಸಿ.ಆರ್, ಯಾರೇನು ಉಡುಪು ಧರಿಸುತ್ತಾರೆ ಎಂಬುದಕ್ಕೂ, ಸರ್ಕಾರಕ್ಕೂ ಏನು ಸಂಬಂಧ ? ಹಿಜಾಬ್ ವಿವಾದ ಯಾಕೆ ಬೇಕು ? ಸಂಘರ್ಷ ಸೃಷ್ಟಿಸುವ ವಾತಾವರಣವನ್ನು ಉತ್ತೇಜಿಸುವುದು ಯಾಕೆ ? ಬಿಜೆಪಿ ಸಮಾಜದ ಸೌಹಾರ್ದತೆಯನ್ನು ಕದಡುತ್ತಿದೆ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...