alex Certify ಸುಳಿವು ನೀಡಿತ್ತು ಪಂಚೆಯಲ್ಲಿದ್ದ ವೀರ್ಯದ ಕಲೆ, ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳಿವು ನೀಡಿತ್ತು ಪಂಚೆಯಲ್ಲಿದ್ದ ವೀರ್ಯದ ಕಲೆ, ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ

ಚೆನ್ನೈ: ಅಪ್ರಾಪ್ತ ಬಾಲಕಿಯನ್ನು ಆಕೆಯ ಸಂಬಂಧಿಯೇ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿ ಕೃಷಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾದ ವಾರದ ನಂತರ ಆಕೆಯ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಕುತಲಂ ಸಮೀಪ ಘಟನೆ ನಡೆದಿದೆ. ನಾಲ್ವರು ಒಡಹುಟ್ಟಿದವರಲ್ಲಿ ಕಿರಿಯವಳಾಗಿದ್ದ ಬಾಲಕಿ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ತಾಯಿ ದಿನಗೂಲಿ ಕೆಲಸ ಮಾಡುತ್ತಾರೆ. ಆಕೆಯ ಸಹೋದರಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರು ಹಿರಿಯ ಸಹೋದರರು ಕೂಡ ಕೆಲಸಕ್ಕೆ ಹೋಗುತ್ತಿದ್ದು ಕುಟುಂಬದ ಸದಸ್ಯರು ಆಕೆಯೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದರಿಂದ ಬಡತನದಲ್ಲಿದ್ದ ಕುಟುಂಬ ಸದಸ್ಯರು ದುಡಿಯಲು ಹೋಗುತ್ತಿದ್ದರು.

ಹುಡುಗಿಯ ಮನೆಯ ಸಮೀಪವೇ ವಾಸವಾಗಿದ್ದ ಆಕೆಯ ಸಂಬಂಧಿಯಾಗಿರುವ ಬೋರ್ವೆಲ್ ಸಂಸ್ಥೆಯ ಉದ್ಯೋಗಿ ದೈಹಿಕ ಸಂಬಂಧ ಬೆಳೆಸುವಂತೆ ಬಾಲಕಿಗೆ ಬಲವಂತ ಮಾಡಿದ್ದಾನೆ. ಅಕ್ಟೋಬರ್ 7 ರಂದು ಹುಡುಗಿ ಚಿಕ್ಕಪ್ಪನ ಮನೆಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಸಂದರ್ಭದಲ್ಲಿ ಎಲ್ಲ ನಾಪತ್ತೆಯಾಗಿದ್ದಾಳೆ. ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದಾಗ ಆರೋಪಿ ಕೂಡ ಹುಡುಗಿಯನ್ನು ಹುಡುಕುವವನಂತೆ ನಾಟಕವಾಡಿದ್ದಾನೆ. ಕೊನೆಗೆ ಬಾಲಕಿ ಸುಳಿವು ಸಿಗದಿದ್ದಾಗ ಕುತಲಂ ಪೊಲೀಸರಿಗೆ ರಾತ್ರಿ 11 ಗಂಟೆಯ ಸುಮಾರಿಗೆ ದೂರು ನೀಡಲಾಗಿದೆ.

ಮಧ್ಯರಾತ್ರಿ 1 ಗಂಟೆಯ ವೇಳೆಗೆ ಕೃಷಿ ಕಾಲುವೆಯಲ್ಲಿ ಬಾಲಕಿಯ ಮೃತದೇಹ ತೇಲುತ್ತಿರುವುದನ್ನು ಹುಡುಕಾಟದಲ್ಲಿದ್ದ ಗ್ರಾಮಸ್ಥರು ಗಮನಿಸಿದ್ದಾರೆ. ಮೀನುಗಾರರ ನೆರವಿನಿಂದ ಆಕೆಯ ಮೃತದೇಹವನ್ನು ಮನೆಗೆ ತಂದು ಗಮನಿಸಿದಾಗ ಬಟ್ಟೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಬಳಿಕ ಸಂಬಂಧಿಕರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ನಂತರ ಸಂಬಂಧಿಕರು, ಕುಟುಂಬದವರು ಮೃತದೇಹ ಸ್ವೀಕರಿಸಲು ನಿರಾಕರಿಸಿ ಇಂತಹ ಘೋರ ಕೃತ್ಯವೆಸಗಿದ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳು ತನಿಖಾ ತಂಡವನ್ನು ರಚಿಸಿದ್ದು, ಆರೋಪಿ ನಿವಾಸದಲ್ಲಿ ಶೋಧ ಕೈಗೊಂಡಾಗ ಆತನ ಧೋತಿ ಪತ್ತೆಯಾಗಿದೆ. ಅದರಲ್ಲಿ ವೀರ್ಯದ ಕುರುಹುಗಳು ಕೂಡ ಕಂಡುಬಂದಿವೆ.

ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅತ್ಯಾಚಾರದ ಬಳಿಕ ಧೋತಿಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಮೃತದೇಹವನ್ನು ಕಾಲುವೆಗೆ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...