alex Certify ದಾರಿ ತಪ್ಪಿದ್ಲಾ ಪತ್ನಿ…? ವಿವಾಹೇತರ ಸಂಬಂಧ ಮುಚ್ಚಿಟ್ಟ ಶಂಕೆಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ್ಲಾ ಪತ್ನಿ…? ವಿವಾಹೇತರ ಸಂಬಂಧ ಮುಚ್ಚಿಟ್ಟ ಶಂಕೆಯಿಂದ ಘೋರ ಕೃತ್ಯ

ನೋಯ್ಡಾ: ಪತ್ನಿ ಶೀಲ ಶಂಕಿಸಿದ ವ್ಯಕ್ತಿಯೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಗಾಜಿಯಾಬಾದ್‌ನಲ್ಲಿ ಎಸೆದಿದ್ದಾನೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ದುಪಟ್ಟಾ ಬಳಸಿ ತನ್ನ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿದ ಆರೋಪದ ಮೇಲೆ ಲಾಲ್ತಾ ಪ್ರಸಾದ್ ಎಂದು ಗುರುತಿಸಲಾಗಿರುವ ಆರೋಪಿ ಬಂಧಿತನಾಗಿದ್ದಾನೆ. ತನ್ನ ಸಹವರ್ತಿಯಾಗಿದ್ದ ದೀಪಾಂಶು ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳೆಂದು ಶಂಕಿಸಿ ಹೀಗೆ ಮಾಡಿದ್ದಾನೆ.

ಪತ್ನಿಗೆ ಈಗಾಗಲೇ ಮದುವೆಯಾಗಿತ್ತು

ತನಿಖೆಯ ಪ್ರಕಾರ, ಸಂತ್ರಸ್ತೆ ಚಾಲಕನಾಗಿದ್ದ ಲಾಲ್ತಾನೊಂದಿಗೆ ತರಕಾರಿ ಮಾರುಕಟ್ಟೆಗೆ ಪ್ರತಿನಿತ್ಯ ಹೋಗುತ್ತಿದ್ದಳು. ಆರೋಪಿ ಹಾಗೂ ಮಹಿಳೆ 5 ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು.  ಪತ್ನಿ ಈಗಾಗಲೇ ಬೇರೊಬ್ಬರನ್ನು ಮದುವೆಯಾಗಿ ನಾಲ್ಕು ವರ್ಷದ ಮಗುವಿನ ತಾಯಿಯಾಗಿದ್ದಾಳೆ ಎಂದು ತಿಳಿದ ಲಾಲ್ತಾ ಪ್ರಸಾದ್ ಆಕ್ರೋಶಗೊಂಡಿದ್ದ.

ಆತನಿಗೆ ಪತ್ನಿ ಕಂಡರೆ ಆಗಿ ಬರುತ್ತಿರಲಿಲ್ಲ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಕೊಲೆ ಮಾಡಿದ್ದಾನೆ. ಆರೋಪಿ ತನ್ನ ಸಂಬಂಧಿ ದೀಪಾಂಶು ಜೊತೆಗೂಡಿ ನೋಯ್ಡಾದ 2 ನೇ ಹಂತಕ್ಕೆ ಆಕೆಯನ್ನು ಕರೆದೊಯ್ದಿದ್ದಾನೆ. ನಂತರ ಇಬ್ಬರೂ ಆಕೆಯನ್ನು ಕೊಂದು ಶವವನ್ನು ಗಾಜಿಯಾಬಾದ್‌ನ ಕಣವಾನಿ ಪ್ರದೇಶದಲ್ಲಿ ಎಸೆದರು. ಲಾಲ್ತಾ ಪ್ರಸಾದ್ ತನ್ನ ಪತ್ನಿ ಕೊಲೆ ಮಾಡಿ ಬಂಧಿತನಾಗಿದ್ದು, ಆತನ ಸಹಚರನು ತಲೆಮರೆಸಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...