alex Certify ಸುಶಾಂತ್​ ಸಿಂಗ್​ ಇದ್ದ ಮನೆಗೆ ಬಾಡಿಗೆಗೆ ಬರಲು ಜನರಿಗೆ ಭಯ: ಅಪಾರ್ಟ್​ಮೆಂಟ್​ ಖಾಲಿ ಖಾಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್​ ಸಿಂಗ್​ ಇದ್ದ ಮನೆಗೆ ಬಾಡಿಗೆಗೆ ಬರಲು ಜನರಿಗೆ ಭಯ: ಅಪಾರ್ಟ್​ಮೆಂಟ್​ ಖಾಲಿ ಖಾಲಿ

ಮುಂಬೈ: 2020ರ ಜೂನ್​ 14ರಂದು ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿನ ಬಳಿಕ ಮುಂಬೈನ ಬಾಂದ್ರಾದಲ್ಲಿ ಅವರು ಬಾಡಿಗೆಗೆ ಇದ್ದ ಐಷಾರಾಮಿ ಅಪಾರ್ಟ್​ಮೆಂಟ್​ಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ. ಈ ಮನೆಗೆ ಕಾಲಿಡಲು ಜನರು ಹೆದರುತ್ತಿದ್ದಾರೆ ಎಂದು ರಿಯಲ್​ ಎಸ್ಟೇಟ್​ ಬ್ರೋಕರ್​ ಒಬ್ಬರು ಬಹಿರಂಗಪಡಿಸಿದ್ದಾರೆ.

ಸುಶಾಂತ್​ ಸಿಂಗ್ ರಜಪೂತ್​ ಅವರು ಆತ್ಮಹತ್ಯೆ ಮಾಡಿಕೊಂಡರೋ ಇಲ್ಲವೇ ಅವರ ಕೊಲೆಯಾಗಿದೆಯೋ ತಿಳಿಯದು. ಆದರೆ ಜನರು ಮಾತ್ರ ಇಲ್ಲಿ ಬರಲು ಹೆದರುತ್ತಿದ್ದಾರೆ ಎನ್ನುತ್ತಿದ್ದಾರೆ ಬ್ರೋಕರ್​. ಈ ಅಪಾರ್ಟ್​​ಮೆಂಟ್​ ಮಾಲೀಕರು ಓರ್ವ ಎನ್​ಆರ್​ಐ. ಅವರು ಮುಂಬೈನಲ್ಲಿ ಇರುವುದಿಲ್ಲ. ಈ ಫ್ಲಾಟ್​ಗೆ ಅವರು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕಡಿಮೆ ಮಾಡಲು ಮಾಲೀಕರು ಸಿದ್ಧರಿಲ್ಲ. ಇದೇ ಬೆಲೆಗೆ ಅಕ್ಕ-ಪಕ್ಕದ ಅಪಾರ್ಟ್​ಮೆಂಟ್​​ನಲ್ಲಿ ಫ್ಲಾಟ್​ ಸಿಗುತ್ತಿರುವಾಗ ಇದಕ್ಕೆ ಏಕೆ ಬರಬೇಕು ಎನ್ನುವುದು ಅನೇಕರ ಪ್ರಶ್ನೆ.

ಇದು ನಾಲ್ಕು ಬೆಡ್​ ರೂಮ್​ ಇರುವ ಫ್ಲಾಟ್​. ಕೆಲವು ಸ್ಟಾರ್​ ಸೆಲೆಬ್ರಿಟಿಗಳು ಈ ಫ್ಲಾಟ್​ ಅನ್ನು ಬಾಡಿಗೆಗೆ ಖರೀದಿಸಲು ಉತ್ಸುಕರಾಗಿದ್ದರೂ, ಸಿನಿಮಾ ಸೆಲೆಬ್ರಿಟಿಗಳಿಗೆ ಮನೆ ನೀಡಬಾರದು ಎಂದು ಮಾಲೀಕರು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...