alex Certify ಅರ್ಜಿಯಲ್ಲಿ ಧಮ್​ ಇದ್ದರೆ ಮಾತ್ರ ಕೋರ್ಟ್​ ಮುಂದೆ ತನ್ನಿ : ಸುಪ್ರೀಂ ಕೋರ್ಟ್ ಛಾಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಜಿಯಲ್ಲಿ ಧಮ್​ ಇದ್ದರೆ ಮಾತ್ರ ಕೋರ್ಟ್​ ಮುಂದೆ ತನ್ನಿ : ಸುಪ್ರೀಂ ಕೋರ್ಟ್ ಛಾಟಿ

Calcutta HC judge throws midnight challenge to SC, apex court stays order in special hearing - India Today

ಹಿಂದೂಗಳು, ಜೈನರು, ಬೌದ್ಧರು ಹಾಗೂ ಸಿಖ್ಖರು ಧಾರ್ಮಿಕ ಸ್ಥಳಗಳನ್ನು ಸ್ಥಾಪನೆ ಮಾಡುವ ಹಾಗೂ ನಿರ್ವಹಣೆ ಮಾಡುವ ಹಕ್ಕು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ತಳ್ಳಿ ಹಾಕಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಪೀಠವು ಈ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ತಳ್ಳಿ ಹಾಕಿದೆ. ಇದು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಇದರಲ್ಲಿ ಪ್ರವೇಶಿಸಲು ನ್ಯಾಯಾಲಯ ಇಚ್ಛಿಸುವುದಿಲ್ಲ ಎಂದು ಹೇಳಿದೆ.

ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ನ್ಯಾಯಪೀಠ, ಉಪಾಧ್ಯಾಯರೇ, ಸೂಕ್ತ ಅರ್ಜಿ ಸಲ್ಲಿಕೆ ಮಾಡಿ. ಇದಕ್ಕೆ ಪರಿಹಾರ ನೀಡಲು ಸಾಧ್ಯವೇ,.? ಇಂಥಹ ಅರ್ಜಿಗಳನ್ನು ಹಿಂತೆಗೆದುಕೊಳ್ಳಿ. ಇವುಗಳಲ್ಲಿ ಯಾವುದೇ ಧಮ್​ ಇಲ್ಲ. ಈ ಅರ್ಜಿಯು ವಿಚಾರಣೆಗೆ ಅರ್ಹವೇ ಅಲ್ಲ ಎಂದು ಹೇಳಿದೆ.

ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಕೀಲ ಆಶ್ವಿನಿ ಉಪಾಧ್ಯಾಯ ಸಲ್ಲಿಕೆ ಮಾಡಿದ್ದರು. ಮುಸ್ಲಿಮರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಂತೆ ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ತಮ್ಮ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸುವ, ನಿರ್ವಹಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡಬೇಕು ಎಂದು ಈ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ಈ ಅರ್ಜಿಯಲ್ಲಿ ಅಶ್ವಿನಿ ಉಪಾಧ್ಯಾಯ ಧಾರ್ಮಿಕ ಹಾಗೂ ದತ್ತಿಗಳಿಗೆ ಏಕರೂಪದ ಕೋಡ್​ ಬೇಕೆಂದು ಒತ್ತಾಯಿಸಿದ್ದರು. ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವನ್ನೂ ಅವರು ಪ್ರಶ್ನಿಸಿದ್ದರು. . ದೇಶದಾದ್ಯಂತ ಇರುವ ಸರಿಸುಮಾರು ಒಂಬತ್ತು ಲಕ್ಷ ಹಿಂದೂ ದೇವಾಲಯಗಳಲ್ಲಿ ಸುಮಾರು ನಾಲ್ಕು ಲಕ್ಷವು ಸರ್ಕಾರದ ನಿಯಂತ್ರಣದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...