alex Certify ಟ್ವಿಟರ್​ ಖಾತೆಯಲ್ಲಿ ಬಿಜೆಪಿ ಹೆಸರಿಗೆ ಕೊಕ್​ ನೀಡಿದ ಸುಬ್ರಮಣಿಯನ್​ ಸ್ವಾಮಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಖಾತೆಯಲ್ಲಿ ಬಿಜೆಪಿ ಹೆಸರಿಗೆ ಕೊಕ್​ ನೀಡಿದ ಸುಬ್ರಮಣಿಯನ್​ ಸ್ವಾಮಿ..!

ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ ತಮ್ಮ ಟ್ವಿಟರ್​ ಬಯೋದಿಂದ ಬಿಜೆಪಿ ಹೆಸರನ್ನು ಅಳಿಸಿ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಸುಬ್ರಮಣಿಯನ್​ ಸ್ವಾಮಿ ಹೆಸರನ್ನು ಕೈ ಬಿಟ್ಟ ಬಳಿಕ ಕೇಂದ್ರ ಮಾಜಿ ಸಚಿವ ತಮ್ಮ ಟ್ವಿಟರ್​ ಬಯೋದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಎಂಬ ಹೆಸರನ್ನು ಅಳಿಸಿ ಹಾಕಿದ್ದಾರೆ.

ಬಿಜೆಪಿಗೆ ಬಿಸಿತುಪ್ಪವಾಗಿದ್ದ ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಬಿಗ್ ಶಾಕ್: ಕಾರ್ಯಕಾರಿಣಿಯಿಂದ ಗೇಟ್ ಪಾಸ್

ಈ ಮೂಲಕ ಟ್ವಿಟರ್​ನಲ್ಲಿ ಬಿಜೆಪಿ ಹೆಸರನ್ನು ಸುಬ್ರಮಣಿಯನ್ ಸ್ವಾಮಿ ಕಿತ್ತು ಹಾಕಿದ್ದಾರೆ. ಸದ್ಯ ಸುಬ್ರಮಣಿಯನ್​ ಸ್ವಾಮಿ ಟ್ವಿಟರ್​ನಲ್ಲಿ, ರಾಜ್ಯಸಭಾ ಸಂಸದ, ಕೇಂದ್ರದ ಮಾಜಿ ಕ್ಯಾಬಿನೆಟ್​ ಮಂತ್ರಿ, ಅರ್ಥಶಾಸ್ತ್ರದಲ್ಲಿ ಹಾರ್ವಡ್​ ಪಿಹೆಚ್​ಡಿ ;ಪ್ರೊಫೆಸರ್​; ನನಗೆ ಸಿಕ್ಕಷ್ಟೇ ಒಳ್ಳೆಯದನ್ನು ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ರಾಜ್ಯದ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆ ಸೌಲಭ್ಯದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮರು ಜಾರಿ ಸಾಧ್ಯತೆ

ಎಲ್ಲರಿಗೂ ತಿಳಿದಿರುವಂತೆ ಸುಬ್ರಮಣಿಯನ್​ ಸ್ವಾಮಿ ಪ್ರಧಾನಿ ಮೋದಿಯ ಆರ್ಥಿಕ ನೀತಿಯನ್ನು ವಿರೋಧಿಸುತ್ತಿದ್ದರು, 80 ಸದಸ್ಯರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ರಚಿಸಿದ ವೇಳೆ ಸುಬ್ರಮಣಿಯನ್​ ಸ್ವಾಮಿ ಸೇರಿದಂತೆ ಹಲವರ ಹೆಸರನ್ನು ಕೈ ಬಿಡಲಾಗಿತ್ತು. ಲಖೀಂಪುರ ಹಿಂಸಾಚಾರದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ವರುಣ್​ ಗಾಂಧಿ ಹಾಗೂ ಮೇನಕಾ ಗಾಂಧಿ ಹೆಸರನ್ನೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈ ಬಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...