alex Certify ಆರಗ ಜ್ಞಾನೇಂದ್ರ ಅದಕ್ಷ ಹೋಂ ಮಿನಿಸ್ಟರ್: ಸಿದ್ಧರಾಮಯ್ಯ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರಗ ಜ್ಞಾನೇಂದ್ರ ಅದಕ್ಷ ಹೋಂ ಮಿನಿಸ್ಟರ್: ಸಿದ್ಧರಾಮಯ್ಯ ಗರಂ

ಬಾಗಲಕೋಟೆ: ಬೆಂಗಳೂರಿನ ಜೆಜೆ ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಗೆ ವಿಪಕ್ಷನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಆಲೂರು ಎಸ್.ಕೆ. ಗ್ರಾಮದಲ್ಲಿ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಒಬ್ಬ ಅದಕ್ಷ ಹೋಮ್ ಮಿನಿಸ್ಟರ್. ಈ ತರಹ ಹೇಳಿಕೆ ಕೊಡುವುದು ಮೊದಲಸಲವೇನಲ್ಲ. ಗೃಹ ಸಚಿವರಾಗಿ ಸರಿಯಾದ ಮಾಹಿತಿ ಪಡೆದು ಹೇಳಿಕೆ ನೀಡಬೇಕು. ಇವರ ತಲೆಯಲ್ಲಿ ಕೋಮುವಾದ ವಿಚಾರವೇ ತುಂಬಿದೆ. ಅಲ್ಲಿ ಒಬ್ಬ ಹಿಂದೂ ಹುಡುಗ ಸತ್ತಿದ್ದಾನೆಂದು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಜಾಬ್, ಹಲಾಲ್, ಭಗವದ್ಗೀತೆ, ಮಸೀದಿ ಮೈಕ್, ಮಾವಿನಹಣ್ಣು ವಿಚಾರ ಇವೆಲ್ಲ ಸಣ್ಣಪುಟ್ಟ ವಿಚಾರಗಳು. ಜನರ ತಲೆಗೆ ಇವರು ದ್ವೇಷದ ವಿಚಾರ ತುಂಬುತ್ತಿದ್ದಾರೆ. ಇವರು ಅಧಿಕಾರದಲ್ಲಿರಲು ಲಾಯಕ್ಕಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...