alex Certify ಹಾಸಿಗೆ ಸಮೇತ ತಡರಾತ್ರಿವರೆಗೂ ಶ್ರೀರಾಮುಲು ಧರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸಿಗೆ ಸಮೇತ ತಡರಾತ್ರಿವರೆಗೂ ಶ್ರೀರಾಮುಲು ಧರಣಿ

ಬಳ್ಳಾರಿ: ಬಳ್ಳಾರಿ ತಾಲೂಕಿನ ಬೈರದೇವನಹಳ್ಳಿ ಸಮೀಪ ಎಲ್.ಸಿ. ಕಾಲುವೆ ಪಿಲ್ಲರ್ ದುರಸ್ತಿ ಕಾಮಗಾರಿ ವಿಳಂಬ ವಿರೋಧಿಸಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಥಳದಲ್ಲೇ ಹಾಸಿಗೆ ಸಮೇತ ಧರಣಿ ನಡೆಸಿದ್ದಾರೆ.

ರಾತ್ರಿ ಇಡೀ ಧರಣಿ ನಡೆಸಿದ ಸಚಿವ ಶ್ರೀರಾಮುಲು ಎಲ್.ಸಿ. ಕಾಲುವೆಯ ಪಿಲ್ಲರ್ ದುರಸ್ತಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿವರೆಗೂ ಧರಣಿ ನಡೆಸಿದ್ದಾರೆ.

ಅ. 13 ರಂದು ವೇದಾವತಿ ನದಿಗೆ ನಿರ್ಮಿಸಿದ ಸೇತುವೆಯ ಪಿಲ್ಲರ್ ಕೊಚ್ಚಿ ಹೋಗಿದ್ದು, ಮತ್ತೆರಡು ಪಿಲ್ಲರ್ ಗಳು ಶಿಥಿಲಗೊಂಡಿದ್ದವು. ಕಾಲುವೆ ನೀರು ಸ್ಥಗಿತಗೊಳಿಸಿ ದುರಸ್ತಿ ಕಾರ್ಯಕೈಗೊಳ್ಳಲಾಗಿದ್ದು, ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು, 20 ದಿನಗಳಿಂದ ನೀರಿಲ್ಲದೇ, ರೈತರ ಬೆಳೆ ಒಣಗಲಾರಂಭಿಸಿವೆ. ಹೀಗಾಗಿ ಸಚಿವ ಶ್ರೀರಾಮುಲು ಧರಣಿ ನಡೆಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರುಹರಿಸಬೇಕೆಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...