alex Certify ಕೈದಿಗಳಿಗೆ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಶ್ರೀಲಂಕಾ ಸಚಿವನಿಂದ ರಾಜೀನಾಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈದಿಗಳಿಗೆ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಶ್ರೀಲಂಕಾ ಸಚಿವನಿಂದ ರಾಜೀನಾಮೆ

ತಮಿಳು ಕೈದಿಗಳಿಗೆ ಮಂಡಿಯೂರುವಂತೆ ತಾಕೀತು ಮಾಡಿದ್ದಲ್ಲದೇ, ಗನ್​ ಪಾಯಿಂಟ್​ನಿಂದ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಶ್ರೀಲಂಕಾದ ಕಾರಾಗೃಹ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾರಾಗೃಹ ನಿರ್ವಹಣೆ ಹಾಗೂ ಕೈದಿಗಳ ಪುನರ್ವಸತಿ ರಾಜ್ಯ ಸಚಿವ ಲೋಹನ್​​ ರತ್ವಟ್ಟೆ ಘಟನೆಗೆ ತಮ್ಮ ನಿಷ್ಕಾಳಜಿಯೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷೀಯ ಕಚೇರಿಯ ಮಾಧ್ಯಮ ವಿಭಾಗವು ಅಧಿಕೃತ ಮಾಹಿತಿ ನೀಡಿದೆ. ಶ್ರೀಲಂಕಾ ರಾಷ್ಟ್ರಪತಿ ಗೋಟಬಯ ರಾಜಪಕ್ಸೆ ರತ್ವಟ್ಟೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಇಟಲಿ ಪ್ರವಾಸದಲ್ಲಿರುವ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಕೂಡಲೇ ಸಚಿವ ರತ್ವಟ್ಟೆಗೆ ದೂರವಾಣಿ ಕರೆ ಮಾಡಿ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಹ ರತ್ವಟ್ಟೆ ಬಳಿಯಲ್ಲಿ ರತ್ನ ಹಾಗೂ ಆಭರಣ ಸಂಬಂಧ ಕೈಗಾರಿಕಾ ಖಾತೆಯಿದೆ. ಹೀಗಾಗಿ ಅವರು ಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...