alex Certify ಐಟಿ ದಾಳಿ ಬಳಿಕ ಇದೇ ಮೊದಲ ಬಾರಿಗೆ ಮೌನ ಮುರಿದ ನಟ ಸೋನು ಸೂದ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ದಾಳಿ ಬಳಿಕ ಇದೇ ಮೊದಲ ಬಾರಿಗೆ ಮೌನ ಮುರಿದ ನಟ ಸೋನು ಸೂದ್​..!

ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾದ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್​ ನಟ ಹಾಗೂ ಸಮಾಜ ಸೇವಕ ಸೋನು ಸೂದ್​ ತಮ್ಮ ಮೌನ ಮುರಿದಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಹಾಗೂ ಗುರುಗಾಂವ್​ನಲ್ಲಿ ಸೋನು ಸೂದ್​ಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದರು.

ನೀವು ಯಾವಾಗಲು ನಿಮ್ಮ ಕತೆಯನ್ನು ಹೇಳಲೇಬೇಕು ಎಂದೇನಿಲ್ಲ. ಆದರೆ ಸಮಯವು ಎಲ್ಲವನ್ನು ತಿಳಿಸುತ್ತಿದೆ. ನನ್ನ ಮನಸೋಇಚ್ಛೆಯಿಂದ ನನ್ನೆಲ್ಲ ಶಕ್ತಿಯನ್ನು ಬಳಸಿ ಭಾರತದ ಜನತೆಗೆ ಸೇವೆಗೆ ನನ್ನ ಜೀವನವನ್ನು ಮೀಸಲಿಟ್ಟಿದ್ದಾನೆ. ನಾನು ಕೂಡಿಟ್ಟಿರುವ ಒಂದೊಂದು ರೂಪಾಯಿ ಹಣವೂ ಅವಶ್ಯಕತೆ ಇರುವವರ ಜೀವವನ್ನು ಕಾಪಾಡಲು ಕಾತುರವಾಗಿವೆ. ನನ್ನ ಪಯಣವು ಹೀಗೆ ಮುಂದುವರಿಯುತ್ತದೆ. ಜೈ ಹಿಂದ್​​ ಎಂದು ಸೋನು ಸೂದ್​ ಬರೆದುಕೊಂಡಿದ್ದಾರೆ.

BIG NEWS: ಕೋವಿಡ್ ಪರಿಹಾರವನ್ನೂ ನೀಡಿಲ್ಲ; ಪ್ಯಾಕೇಜು ಕೊಟ್ಟಿಲ್ಲ; ಈಗ ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳು ತಾಳಿ ಮಾರಿ ಬದುಕುವ ಸ್ಥಿತಿ ಬಂದಿದೆ; ಸರ್ಕಾರದ ವಿರುದ್ಧ ಡಿಕೆಶಿ ಕಿಡಿ

ಆದಾಯ ತೆರಿಗೆ ಇಲಾಖೆಗಳು ಬಾಲಿವುಡ್ ನಟ ಸೋನು ಸೂದ್​ಗೆ ಸಂಬಂಧಿಸಿದ ಹಲವು ಆಸ್ತಿಗಳ ಮೇಲೆ ದಾಳಿ ನಡೆಸಿದ್ದು ದಾಳಿ ಬಳಿಕ 20 ಕೋಟಿ ರೂಪಾಯಿ ತೆರಿಗೆ ವಂಚನೆ, ಅಕ್ರಮ ವಿದೇಶಿ ದೇಣಿಗೆ ಸಂಗ್ರಹ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿತ್ತು. ಸೋನು ಸೂದ್​ಗೆ ಸೇರಿದ ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಹಾಗೂ ಗುರುಗ್ರಾಮಗಳಲ್ಲಿ ಒಟ್ಟು ನಾಲ್ಕು ದಿನಗಳ ಕಾಲ ದಾಳಿ ನಡೆದಿತ್ತು.

— sonu sood (@SonuSood) September 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...