alex Certify ಮದುವೆ ಹಿಂದಿನ ದಿನ ಪರಾರಿಯಾಗಿದ್ದ ವರ ವಧುವಿನ ತಂಗಿ ವಿವಾಹವಾಗಿ ಪ್ರತ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹಿಂದಿನ ದಿನ ಪರಾರಿಯಾಗಿದ್ದ ವರ ವಧುವಿನ ತಂಗಿ ವಿವಾಹವಾಗಿ ಪ್ರತ್ಯಕ್ಷ

ಕೊಳ್ಳೇಗಾಲ: ಮದುವೆಯ ಹಿಂದಿನ ದಿನ ಪರಾರಿಯಾಗಿದ್ದ ವರ ಒಂದು ತಿಂಗಳ ನಂತರ ವಧುವಿನ ಸ್ವಂತ ತಂಗಿ ಮದುವೆಯಾಗಿ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ.

ಶಂಕನಪುರ ಗ್ರಾಮದ ದಿನೇಶ್ ಕುಮಾರ್ ಅವರ ಪುತ್ರಿ ದಿವ್ಯಶ್ರೀ ಮತ್ತು ಕುಂತೂರು ಗ್ರಾಮದ ಮಲ್ಲರಾಜು ಅವರ ಪುತ್ರ ಮಹೇಶ್ ಅವರಿಗೆ ಬೆಂಗಳೂರಿನಲ್ಲಿ ಪರಿಚಯವಾಗಿ ಪ್ರೀತಿಸಿದ್ದರು. ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಮಹೇಶ್, ದಿವ್ಯಶ್ರೀ ಅವರ ಮದುವೆ ನವೆಂಬರ್ 27ರಂದು ಚಿಲಕವಾಡಿ ದೇವಾಲಯದಲ್ಲಿ ನಿಶ್ಚಯವಾಗಿತ್ತು. ಮದುವೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಮದುವೆ ಹಿಂದಿನ ದಿನ ಮಹೇಶ್ ನಾಪತ್ತೆಯಾಗಿದ್ದ.

ಈಗ ಪ್ರಕರಣ ತಿರುವು ಪಡೆದುಕೊಂಡಿದ್ದು, ದಿವ್ಯಶ್ರೀ ತಂಗಿ ಮಂಜುಳಾ ಅವರನ್ನು ಮಹೇಶ್ ಮದುವೆಯಾಗಿ ಪ್ರತ್ಯಕ್ಷವಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...