alex Certify ಹತ್ಯೆಯಾದ ಸಿಧು ಮೂಸೇವಾಲ ಕೊನೆ ಹಾಡಿಗೆ ಯೂಟ್ಯೂಬ್ ಕೊಕ್…!‌ ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ಯೆಯಾದ ಸಿಧು ಮೂಸೇವಾಲ ಕೊನೆ ಹಾಡಿಗೆ ಯೂಟ್ಯೂಬ್ ಕೊಕ್…!‌ ಕಾರಣವೇನು ಗೊತ್ತಾ…?

ಪಂಜಾಬ್ ಗಾಯಕ ಸಿಧು ಮೂಸೇವಾಲ ಕೊಲೆಯಾದ ನಂತರ ಅವರು ಹಾಡಿದ್ದ ಕೊನೆಯ ಹಾಡು SYL ಆನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

ಆದರೆ, ಈ ಹಾಡಿನಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ನಡುವಿನ ಸಟ್ಲೆಜ್-ಯಮುನಾ ಸಂಪರ್ಕ ಕಾಲುವೆ ವಿವಾದ ಮತ್ತು ರೈತ ಹೋರಾಟದ ಸಂದರ್ಭದಲ್ಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜವನ್ನು ಹಾರಿಸಿದ್ದನ್ನು ತೋರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ದೂರು ನೀಡಿದ್ದರಿಂದ ಹಾಡನ್ನು ಯೂಟ್ಯೂಬ್ ತನ್ನ ವಾಲ್ ನಿಂದ ತೆಗೆದುಹಾಕಿದೆ.‌

ಈ ವಿಡಿಯೋವನ್ನು 27 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿತ್ತು ಮತ್ತು 3.3 ಮಿಲಿಯನ್ ಲೈಕ್ ಗಳು ಬಂದಿದ್ದವು. ಈ ಹಾಡನ್ನು ಸ್ವತಃ ಸಿಧು ಮೂಸೇವಾಲ ಅವರೇ ಕಂಪೋಸ್ ಮಾಡಿದ್ದರು. ಮೇ 29 ರಂದು ಅವರು ಹತ್ಯೆಯಾಗಿದ್ದು, ಜೂನ್ 23 ರಂದು ಹಾಡನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...