alex Certify ಇಹಲೋಕ ತ್ಯಜಿಸುವ 6 ದಿನ ಮೊದಲು ಮಾನವ ಜೀವನ ಬಲು ಅಗ್ಗ ಎಂದು ಹೇಳಿದ್ದ ಸಿದ್ಧಾರ್ಥ್ ಶುಕ್ಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಹಲೋಕ ತ್ಯಜಿಸುವ 6 ದಿನ ಮೊದಲು ಮಾನವ ಜೀವನ ಬಲು ಅಗ್ಗ ಎಂದು ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಶುಕ್ಲಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆರಂಭಿಕ ವರದಿಯಲ್ಲಿ ಸಿದ್ಧಾರ್ಥ್ ಗೆ ಹೃದಯಾಘಾತವಾಗಿದೆ ಎಂಬುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತ್ರ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ.

ಸಿದ್ಧಾರ್ಥ್ ಶುಕ್ಲಾ, ಆರು ದಿನಗಳ ಮೊದಲು ಸಂದೇಶವೊಂದನ್ನು ನೀಡಿದ್ದರು. ಸಿದ್ಧಾರ್ಥ್ ಶುಕ್ಲಾ, ಆಗಸ್ಟ್ 27 ರಂದು ವ್ಯಕ್ತಿಯೊಬ್ಬರು ಸಿದ್ಧಾರ್ಥ್ ಕೆಲಸದ ಬಗ್ಗೆ ಬರೆದಿದ್ದರು. ಸಿದ್ಧಾರ್ಥ್ ಬೀದಿ ನಾಯಿಗಳ ಉಳಿವಿಗೆ ಪ್ರಚಾರ ಮಾಡುತ್ತಿದ್ದಾರೆ. ಪ್ರಾಣಿಗಳ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆಂದು ಬರೆದು, ಟ್ಯಾಗ್ ಮಾಡಿದ್ದರು. ಆ ವ್ಯಕ್ತಿಗೆ ಧನ್ಯವಾದ ಹೇಳಿದ್ದ ಸಿದ್ಧಾರ್ಥ್, ಜಗತ್ತಿನಲ್ಲಿ ಮಾನವ ಜೀವನವು ತುಂಬಾ ಅಗ್ಗವಾಗಿದೆ. ನೋಡಲು ಆಹ್ಲಾದಕರವಾಗಿರುತ್ತದೆ. ಬೀದಿನಾಯಿಗಳ ಬಗ್ಗೆ ಸಹಾನುಭೂತಿ ಇರಲಿ ಎಂದು ಬರೆದಿದ್ದರು.

ಸಿದ್ಧಾರ್ಥ್ ಶುಕ್ಲಾ, ಟ್ವಿಟರ್‌ನಲ್ಲಿ ತುಂಬಾ ಸಕ್ರಿಯರಾಗಿದ್ದರು. ಜಗತ್ತಿನಲ್ಲಿ ಪ್ರೀತಿಯನ್ನು ಹರಡುವಂತೆ ಈ ಹಿಂದೆ ಅಭಿಮಾನಿಯೊಬ್ಬರಿಗೆ ಹೇಳಿದ್ದರು. ಸಿದ್ಧಾರ್ಥ್ ಶುಕ್ಲಾ ಅವರ  ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗ್ತಿತ್ತು. ಸಿದ್ಧಾರ್ಥ್, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಅವರು ಅನೇಕ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿಕಾ ವಧು ಟಿವಿ ಧಾರಾವಾಹಿಯಿಂದ ರಾತ್ರೋರಾತ್ರಿ ಮನೆಮಾತಾದ ಸಿದ್ಧಾರ್ಥ್, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...