alex Certify ‘ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್​, ಬಿಜೆಪಿ ಮೇಲೆ ಇಲ್ಲ ಯಾವುದೇ ಸಾಫ್ಟ್​ ಕಾರ್ನರ್​​’ ; ಹುಬ್ಬಳ್ಳಿಯಲ್ಲಿ ಹೆಚ್​ಡಿಕೆ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್​, ಬಿಜೆಪಿ ಮೇಲೆ ಇಲ್ಲ ಯಾವುದೇ ಸಾಫ್ಟ್​ ಕಾರ್ನರ್​​’ ; ಹುಬ್ಬಳ್ಳಿಯಲ್ಲಿ ಹೆಚ್​ಡಿಕೆ ಸ್ಪಷ್ಟನೆ

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್​ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯನವರೇ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವಂತೆ ಕೆಲಸ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕನಿಗೆ ಟಾಂಗ್ ನೀಡಿದರು.

ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ. ಆದರೆ ನಾನು ಎಲ್ಲ ನಾಯಕರಿಗೂ ಹೇಳುತ್ತೇನೆ. ಚುನಾವಣೆಯೇ ಇರಬಹುದು ಅಥವಾ ಜನಪ್ರತಿನಿಧಿಯೇ ಆಗಿರಬಹುದು. ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ‌ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆಚಾಟ ಮಾಡಿಕೊಂಡು ಹೋದರೆ ಅದಕ್ಕೆ ಕೊನೆ ಅನ್ನೋದು ಇರೋದಿಲ್ಲ ಎಂದು ಹೇಳಿದ್ರು.

ಜೆಡಿಎಸ್​ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಇದನ್ನು ಬಿಟ್ಟು ಇನ್ನೇನನ್ನು ಹೇಳಲು ಸಾಧ್ಯ..? ನನಗೆ ಯಾವುದೇ ಕಾರಣಕ್ಕೂ ಯಾರ ಮೇಲೆಯೂ ಸಾಫ್ಟ್​ ಕಾರ್ನರ್​ ಇಲ್ಲ, ನಮಗೆ ಬಿಜೆಪಿ ಮೇಲೆ ಸಾಫ್ಟ್​ ಕಾರ್ನರ್​ ಇದ್ದಿದ್ದರೆ ಕಾಂಗ್ರೆಸ್​ ಜೊತೆ ಏಕೆ ಸರ್ಕಾರ ರಚಿಸುತ್ತಿದ್ವಿ..? ಬಿಜೆಪಿ ಜೊತೆಯೇ 5 ವರ್ಷ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ನಿರ್ಮಾಣವಾಗಲು ಕೂಡ ಇದೇ ಸಿದ್ದರಾಮಯ್ಯ ಕಾರಣ. ಅವರ ನಡವಳಿಕೆಯಿಂದಲೇ ಸರ್ಕಾರ ರಚನೆಯಾಯ್ತು. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಬಳಿ ವಿಷಯ ಇಲ್ಲ. ಹೀಗಾಗಿ ಅವರು ಒಳ ಒಪ್ಪಂದ ಅಂತೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...