alex Certify ಅವಧಿ ಮೀರಿದ ನಂತರವೂ ಅಂಗಡಿ ತೆಗೆದು ಆವಾಜ್ ಹಾಕಿದ ಮಾಲೀಕನಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಧಿ ಮೀರಿದ ನಂತರವೂ ಅಂಗಡಿ ತೆಗೆದು ಆವಾಜ್ ಹಾಕಿದ ಮಾಲೀಕನಿಗೆ ಬಿಗ್ ಶಾಕ್

ಯಾದಗಿರಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 10 ಗಂಟೆಯ ನಂತರವೂ ಅಂಗಡಿ ತೆರೆದಿದ್ದ ಹಿನ್ನೆಲೆಯಲ್ಲಿ ಯಾದಗಿರಿ ನಗರಸಭೆ ಆಯುಕ್ತ ಬಿ.ಟಿ. ನಾಯಕ್ ಪ್ರಶ್ನಿಸಿದ್ದಾರೆ.

ಹೀಗೆ ಪ್ರಶ್ನಿಸಿದ ಆಯುಕ್ತರಿಗೆ ಅಂಗಡಿಯ ಮಾಲೀಕ ಆವಾಕ್ ಹಾಕಿದ್ದಾನೆ. ನನ್ನ ಅಂಗಡಿಯಲ್ಲಿ ನಾನು ಕುಳಿತುಕೊಂಡಿದ್ದೇನೆ ಏನಿವಾಗ? ನನ್ನ ಅಂಗಡಿಯಲ್ಲಿ ಬೇರೆಯವರು ಕುಳಿತುಕೊಳ್ಳಲಾಗುತ್ತಾ? ಎಂದೆಲ್ಲಾ ಪ್ರಶ್ನೆ ಮಾಡಿದ್ದಾನೆ. ಯಾದಗಿರಿ ನಗರಸಭೆ ಆಯುಕ್ತರಿಗೆ ಪ್ರಶ್ನೆ ಮಾಡಿ ಆವಾಜ್ ಹಾಕಿದ ಅಂಗಡಿ ಮಾಲೀಕನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಅಂಗಡಿಯನ್ನು ನಗರಸಭೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...