alex Certify SHOCKING NEWS: ಸೆಕ್ಯೂರಿಟಿ ಗಾರ್ಡ್ ಕಟ್ಟಿ ಹಾಕಿ ಸಹಕಾರಿ ಸಂಘದಲ್ಲಿ ದರೋಡೆ; ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಕಳ್ಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸೆಕ್ಯೂರಿಟಿ ಗಾರ್ಡ್ ಕಟ್ಟಿ ಹಾಕಿ ಸಹಕಾರಿ ಸಂಘದಲ್ಲಿ ದರೋಡೆ; ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಕಳ್ಳರು

ಕಾರವಾರ: ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನುಗ್ಗಿದ 6 ಜನ ಮುಸುಕುಧಾರಿಗಳ ತಂಡ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.

6 ಜನರಿದ್ದ ಮುಸುಕುಧಾರಿಗಳ ಗುಂಪು ತಡರಾತ್ರಿ ಸಹಕಾರಿ ಸಂಘದ ಕಾವಲುಗಾರ ಮಾದೇವಪ್ಪ ಎಂಬುವವರ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದೆ.

ಗ್ಯಾಸ್ ಕಟರ್ ಬಳಸಿ ಸಹಕಾರಿ ಸಂಘದ ಕಬ್ಬಿಣದ ಬಾಗಿಲು ಮುರಿದು, ಕಬ್ಬಿಣದ ಕಪಾಟು ತೆಗೆದು ಚಿನ್ನಾಭರಣ, ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುಂಡಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...