alex Certify SHOCKING NEWS: ವೃದ್ಧೆ ಹೊಟ್ಟೆ ಕೊಯ್ದು 15 ದಿನ ಹಾಗೇ ಬಿಟ್ಟ ವೈದ್ಯ; ಮಹಿಳೆ ಸ್ಥಿತಿ ಚಿಂತಾಜನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ವೃದ್ಧೆ ಹೊಟ್ಟೆ ಕೊಯ್ದು 15 ದಿನ ಹಾಗೇ ಬಿಟ್ಟ ವೈದ್ಯ; ಮಹಿಳೆ ಸ್ಥಿತಿ ಚಿಂತಾಜನಕ

Sex change operation done by BPharm students goes awry, man dies | India News - Times of India

ದಾವಣಗೆರೆ: ಹೊಟ್ಟೆಯಲ್ಲಿ ಗಡ್ಡೆಯಾಗಿದ್ದಕ್ಕೆ ಆಪರೇಶನ್ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯೊಬ್ಬರ ಹೊಟ್ಟೆಯನ್ನು ಕೊಯ್ದು ಸ್ಟಿಚ್ ಹಾಕದೇ ವೈದ್ಯರೊಬ್ಬರು 15 ದಿನಗಳಿಂದ ಹಾಗೇ ಬಿಟ್ಟಿದ್ದು, ವೃದ್ಧೆಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಅನ್ನಪೂರ್ಣ ಎಂಬ ವೃದ್ಧೆಗೆ ಹೊಟ್ಟೆಯ ಆಪರೇಷನ್ ಮಾಡಿರುವ ದಾವಣಗೆರೆ ಜಿಲ್ಲೆಯ ಗುರುನಾಥ ಆಸ್ಪತ್ರೆ ವೈದ್ಯರು ಬೇಜವಾಬ್ದಾರಿ ಮೆರೆದಿದ್ದಾರೆ. ವೈದ್ಯರ ನಿರ್ಲಕ್ಷಕ್ಕೆ ಮಹಿಳೆ ಕೋಮಾ ಸ್ಥಿತಿಗೆ ತಲುಪಿದ್ದಾರೆ.

ವೃದ್ಧೆಯ ಹೊಟ್ಟೆ ಆಪರೇಷನ್ ಮಾಡಿರುವ ವೈದ್ಯ ಡಾ. ದೀಪಕ್ ಬೊಂಡಾಡೆ ಹೊಲಿಗೆ ಹಾಕದೇ ಹಾಗೇ ಬಿಟ್ಟಿದ್ದು, ಈ ಬಗ್ಗೆ ಕುಟುಂಬದವರು ಪ್ರಶ್ನೆ ಮಾಡಿದರೆ ಆಪರೇಷನ್ ಮಾಡಿದ ಜಾಗ ತಾನಾಗಿಯೇ ಮುಚ್ಚಿಕೊಳ್ಳುತ್ತದೆ. ಹೊಲಿಗೆ ಹಾಕುವ ಅಗತ್ಯವಿಲ್ಲ ಎಂದು ಹೇಳಿದ್ದಾರಂತೆ.

ಆದರೆ ವೃದ್ಧೆಗೆ ಆಪರೇಷನ್ ಮಾಡಿದಾಗಿನಿಂದ ಕಣ್ಣು ಕಾಣುತ್ತಿಲ್ಲ, ಊಟ, ತಿಂಡಿ ಸಹ ಮಾಡುತ್ತಿಲ್ಲ. ಆಪರೇಷನ್ ಗಾಗಿ ಈಗಾಗಲೇ 2 ಲಕ್ಷ ರೂಪಾಯಿ ಬಿಲ್ ಆಗಿದೆ. ಈಗ ಮಹಿಳೆಯ ಸ್ಥಿತಿ ಕೋಮಾಗೆ ಜಾರಿದೆ. ಹೆಚ್ಚಿನ ಚಿಕಿತ್ಸೆ ನೀಡುವುದು ಕಷ್ಟ ಸಾಧ್ಯವಾಗಿದೆ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...