alex Certify SHOCKING NEWS: ಬಾವನನ್ನು ಕೊಲೆಗೈದು, ಕೈ ಕತ್ತರಿಸಿ ಠಾಣೆಗೆ ತಂದ ಬಾಮೈದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಬಾವನನ್ನು ಕೊಲೆಗೈದು, ಕೈ ಕತ್ತರಿಸಿ ಠಾಣೆಗೆ ತಂದ ಬಾಮೈದ

ಮೈಸೂರು: ಪತಿ – ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಬಾಮೈದನೇ ಬಾವನ ಕೊಲೆಗೈದು ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿರುವ ಘೋರ ಘಟನೆ ಮೈಸೂರಿನ ಗೌಸಿಯಾ ನಗರದಲ್ಲಿ ನಡೆದಿದೆ.

ಮಹಮ್ಮದ್ ಸರಾನ್ (27) ಕೊಲೆಯಾದ ದುರ್ದೈವಿ. ಮಹಮ್ಮದ್ ಸರಾನ್ ಹಾಗೂ ರೂಬಿನಾ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಪತಿ – ಪತ್ನಿ ನಡುವಿನ ಜಗಳ ತಾರಕಕ್ಕೇರಿ ರೂಬಿಯಾ ಕಡೆಯ ಸಂಬಂಧಿಕರು ಮಧ್ಯಪ್ರವೇಶ ಮಾಡಿದ್ದಾರೆ.

ಜಗಳ ಅತಿರೇಕಕ್ಕೆ ತಿರುಗಿದ್ದು, ರೂಬಿಯಾ ಕಡೆಯವರು ಮಹಮದ್ ಸರಾನ್ ನನ್ನು ಹತ್ಯೆ ಮಾಡಿದ್ದಾರೆ. ಬಾವನ ಮೇಲಿನ ಕೋಪಕ್ಕೆ ಬಾಮೈದ ಕದೀರ್ ಬಾವನ ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತಂದಿದ್ದಾನೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...