alex Certify SHOCKING NEWS: ನದಿಗೆ ಇಳಿದ ಬಾಲಕನನ್ನು ಹೊತ್ತೊಯ್ದ ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ನದಿಗೆ ಇಳಿದ ಬಾಲಕನನ್ನು ಹೊತ್ತೊಯ್ದ ಮೊಸಳೆ

ರಾಯಚೂರು: ಕುಡಿಯುವ ನೀರು ತರಲು ನದಿಗೆ ಇಳಿದ ಬಾಲಕನನ್ನು ಮೊಸಳೆ ಹೊತ್ತೊಯ್ದ ಘಟನೆ ರಾಯಚೂರು ಜಿಲ್ಲೆಯ ಕುರವಕಲಾ ಗ್ರಾಮದಲ್ಲಿ ನಡೆದಿದೆ.

9 ವರ್ಷದ ನವೀನ್ ನನ್ನು ಮೊಸಳೆ ಹೊತ್ತೊಯ್ದಿದೆ. ಈರಣ್ಣ ಎಂಬುವವರ ಪುತ್ರ ನವೀನ್ ಪೋಷಕರ ಜೊತೆ ಜಮೀನಿಗೆ ಹೋಗಿದ್ದ. ಈ ವೇಳೆ ಪೋಷಕರು ನದಿಯಿಂದ ಕುಡಿಯಲು ನೀರು ತರಲು ಹೇಳಿದ್ದಾರೆ.

ನವೀನ್ ಮತ್ತೊಬ್ಬ ಬಾಲಕನ ಜೊತೆ ನೀರು ತರಲೆಂದು ನದಿಗೆ ಇಳಿದಿದ್ದಾನೆ. ಬಾಟಲ್ ಗೆ ನೀರು ತುಂಬಿಸುತ್ತಿದ್ದ ವೇಳೆ ಮೊಸಳೆ ಬಾಲಕನನ್ನು ಹೊತ್ತೊಯ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...