alex Certify SHOCKING NEWS: ಟಾರ್ಚ್ ಲೈಟ್ ಕಂಡು ಕಳ್ಳನನ್ನು ‘ದೆವ್ವ’ ಎಂದು ಕಂಗಾಲಾದ ಸ್ಥಳೀಯರು; ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಟಾರ್ಚ್ ಲೈಟ್ ಕಂಡು ಕಳ್ಳನನ್ನು ‘ದೆವ್ವ’ ಎಂದು ಕಂಗಾಲಾದ ಸ್ಥಳೀಯರು; ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಘಟನೆ

ಬೆಂಗಳೂರು: ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಐವರು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಐಷಾರಾಮಿ, ಬೃಹತ್ ಮನೆ ಇದೀಗ ಭೂತದ ಬಂಗಲೆಯಂತೆ ಭಾಸವಾಗುತ್ತಿದೆ. ಮನೆಯಲ್ಲಿದ್ದ ಜನರು ಆತ್ಮಹತ್ಯೆಗೆ ಶರಣಾದ ಬಳಿಕ ಅಕ್ಕ-ಪಕ್ಕದವರೂ ಕೂಡ ಶಂಕರ್ ಮನೆ ನೋಡಿದಾಗಲೆಲ್ಲ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದೀಗ ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರು ತಮ್ಮ ಕರಾಮತ್ತು ತೋರಿಸುತ್ತಿದ್ದಾರೆ.

ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಇದೀಗ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮನೆ ದೋಚಲು ಯತ್ನಿಸಿದ್ದ ಕಳ್ಳನೊಬ್ಬ ಟಾರ್ಚ್ ಲೈಟ್ ಹಾಕಿ ಮನೆಯಲ್ಲಿ ಚಿನ್ನಾಭರಣ ಹುಡುಕಾಟ ನಡೆಸಿದ್ದಾನೆ. ಟಾರ್ಚ್ ಲೈಟ್ ಕಂಡ ಸ್ಥಳೀಯರು ಕಳ್ಳನನ್ನು ದೆವ್ವ ಎಂದುಕೊಂಡು ಕಂಗಾಲಾಗಿದ್ದಾರೆ. ಆದರೂ ಧೈರ್ಯ ಮಾಡಿ ಮನೆ ಬಳಿ ಹೋಗಿ ನೋಡಿದ್ದಾರೆ.

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಪುತ್ರಿ ತಾಯಿಗೆ ಮಾಹಿತಿ ನೀಡಿದ ಬಳಿಕ ಬಯಲಾಯ್ತು ನೀಚ ಕೃತ್ಯ

ತನ್ನತ್ತ ಬರುತ್ತಿರುವ ಜನರನ್ನು ಕಂಡು ತನ್ನನ್ನು ಹಿಡಿಯುತ್ತಾರೆ ಎಂದು ಗೊತಾಗುತ್ತಿದ್ದಂತೆ ಕಳ್ಳ ದೆವ್ವ, ದೆವ್ವ…ಎಂದು ಕಿರುಚಲು ಆರಂಭಿಸಿದ್ದಾನೆ. ಇದು ದೆವ್ವ ಅಲ್ಲ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಕಳ್ಳ ಭರತ್ ನನ್ನು ಹಿಡಿದು ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಬಳಿಕ ಕಳ್ಳನನ್ನು ಹಿಡಿದು ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...