alex Certify SHOCKING NEWS: ಜಮೀನು ಮಾರಲು ಪತ್ನಿಯ ವಿರೋಧ; ಎಗ್ ರೈಸ್ ನಲ್ಲಿ ವಿಷ ಬೆರೆಸಿ ಹೆಂಡತಿ ಮಕ್ಕಳಿಗೆ ನೀಡಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಜಮೀನು ಮಾರಲು ಪತ್ನಿಯ ವಿರೋಧ; ಎಗ್ ರೈಸ್ ನಲ್ಲಿ ವಿಷ ಬೆರೆಸಿ ಹೆಂಡತಿ ಮಕ್ಕಳಿಗೆ ನೀಡಿದ ವ್ಯಕ್ತಿ

ವಿಜಯಪುರ: ಎಗ್ ರೈಸ್ ನಲ್ಲಿ ವಿಷಬೆರಸಿ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ನೀಡಿದ್ದು, ವಿಷಾಹಾರ ಸೇವಿಸಿದ ಎರಡುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದ ಗೋನಾಳ ಎಸ್.ಹೆಚ್.ಗ್ರಾಮದಲ್ಲಿ ನಡೆದಿದೆ.

ಚಂದ್ರಶೇಖರ್ ಎಂಬಾತ ಕೈತುಂಬಾ ಸಾಲ ಮಾಡಿಕೊಂಡಿದ್ದ. ಜಮೀನು ಮಾರಲು ಪತ್ನಿ ಸಾವಿತ್ರಿ ವಿರೋಧಿಸಿದ್ದಾಳೆ. ದುಡಿದು ಸಾಲ ತೀರಿಸೋಣ ಎಂದು ಹೇಳಿದ್ದಾಳೆ. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಕೋಪಗೊಂಡ ಚಂದ್ರಶೇಖರ್ ಎಗ್ ರೈಸ್ ನಲ್ಲಿ ವಿಷ ಬೆರಸಿ ಪತ್ನಿ ಸಾವಿತ್ರಿ ಹಾಗೂ ಎರಡುವರೆ ವರ್ಷದ ಮಗ ಶಿವರಾಜ್ ಹಾಗೂ 5 ವರ್ಷದ ಮಗಳು ರೇಣುಕಾಗೆ ನೀಡಿದ್ದಾನೆ.

ಎಗ್ ರೈಸ್ ತಿಂದ ಬಳಿಕ ಪತಿ ಮಹಾಶಯ ಪತ್ನಿಗೆ ಊಟದಲ್ಲಿ ವಿಷಬೆರಸಿ ಕೊಟ್ಟಿದ್ದಾಗಿ ಹೇಳಿದ್ದಾನೆ. ಮೂವರೂ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡುವರೆ ವರ್ಷದ ಮಗು ಶಿವರಾಜ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮಗಳು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಮಹಿಳೆ ಸಾವಿತ್ರಿ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ.

ತಾಳಿಕೋಟೆ ಪೊಲೀಸರು ಇದೀಗ ಆರೋಪಿ ಚಂದ್ರಶೇಖರನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...