alex Certify SHOCKING: ಕಣಜದ ಹುಳಗಳು ಕಚ್ಚಿ ಇಬ್ಬರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕಣಜದ ಹುಳಗಳು ಕಚ್ಚಿ ಇಬ್ಬರು ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಣಜದ ಹುಳುಗಳು ಕಚ್ಚಿ ಇಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿಯ ಬಳ್ಳಾಪುರ ನಿವಾಸಿ ಸಿ.ಎನ್. ನಂಜಪ್ಪ(50) ಹಾಗೂ ತರಿಕೆರೆಯ ಮಲ್ಲಿಕಾರ್ಜುನ(55) ಮೃತಪಟ್ಟವರು ಎಂದು ಹೇಳಲಾಗಿದೆ.

ತಾಯಿಯಾದ ತಿಂಗಳಲ್ಲೇ ಕ್ಷೇತ್ರದ ಕರ್ತವ್ಯಕ್ಕೆ ಮರಳಿದ ನುಸ್ರತ್‌ ಜಹಾನ್

ಭದ್ರಾ ನದಿ ತೀರದಲ್ಲಿದ್ದ ತೋಟದಲ್ಲಿ ಅಡಿಕೆ ಕೊಯ್ಲು ಮಾಡಿಕೊಂಡು ಟ್ರ್ಯಾಕ್ಟರ್ ನಲ್ಲಿ ಬರುತ್ತಿದ್ದ ವೇಳೆ ಅದರಲ್ಲಿದ್ದ ದೋಟಿ ಹೊಂಗೆ ಮರದಲ್ಲಿದ್ದ ಕಣಜದ ಗೂಡಿಗೆ ತಾಗಿದೆ. ಟ್ರ್ಯಾಕ್ಟರ್ ಹಿಂಭಾಗದಲ್ಲಿ ಬೈಕ್ ನಲ್ಲಿ ಬರುತ್ತಿದ್ದ ನಂಜಪ್ಪನವರ ಮೇಲೆ ಗೂಡು ಬಿದ್ದಿದ್ದು, ಅದರಲ್ಲಿದ್ದ ಹುಳಗಳು ಅವರಿಗೆ ಕಚ್ಚಿವೆ.

ಅವರು ಜೋರಾಗಿ ಕೂಗಾಡಿದಾಗ ಟ್ರ್ಯಾಕ್ಟರ್ ನಿಲ್ಲಿಸಿ ಮಲ್ಲಿಕಾರ್ಜುನ ರಕ್ಷಣೆಗೆ ಬಂದಿದ್ದು, ಅವರಿಗೂ ಕೂಡ ಕಣಜದ ಹುಳಗಳು ಮುತ್ತಿವೆ. ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

ಸೀಜ್​ ಆದ ಕಾರು ಕೊಳ್ಳಲು ಹೋದ ವ್ಯಕ್ತಿಗೆ 80 ಸಾವಿರ ರೂ. ಪಂಗನಾಮ..!

ತೀವ್ರ ಅಸ್ವಸ್ಥಗೊಂಡ ಮಲ್ಲಿಕಾರ್ಜುನ ಅವರನ್ನು ತರೀಕೆರೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ನಂಜಪ್ಪ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...