alex Certify ಅವನ ವೈಯಕ್ತಿಕ ತರಲೆಗೆ ನಾನೇಕೆ ಬರಲಿ…? ಯತ್ನಾಳ್ ಪರ ಬಿಜೆಪಿ ಧರಣಿಗೆ ಸಾಥ್ ನೀಡದ ಶಿವರಾಮ್ ಹೆಬ್ಬಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವನ ವೈಯಕ್ತಿಕ ತರಲೆಗೆ ನಾನೇಕೆ ಬರಲಿ…? ಯತ್ನಾಳ್ ಪರ ಬಿಜೆಪಿ ಧರಣಿಗೆ ಸಾಥ್ ನೀಡದ ಶಿವರಾಮ್ ಹೆಬ್ಬಾರ್

ಬೆಂಗಳೂರು: ಅವನ ವೈಯಕ್ತಿಕ ತರಲೆಗೆ ನಾನೇಕೆ ಬರಲಿ, ನಾನು ಬರುವುದಿಲ್ಲ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬೈರತಿ ಸುರೇಶ್ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ನಡುವೆ ಅಧಿಕಾರಿಗಳ ಪೋಸ್ಟಿಂಗ್ ವಿಚಾರಕ್ಕೆ ಜಟಾಪಟಿ ವೇಳೆ ಪ್ರತಿಪಕ್ಷ ಸದಸ್ಯರು ಧರಣಿ ನಡೆಸಿದ್ದಾರೆ.

ಈ ಧರಣಿಯಲ್ಲಿ ಬಿಜೆಪಿಯ ಶಿವರಾಂ ಹೆಬ್ಬಾರ್ ಭಾಗವಹಿಸದೆ ತಮ್ಮ ಆಸನದಲ್ಲೇ ಕುಳಿತುಕೊಂಡಿದ್ದಾರೆ. ಬೈರತಿ ಸುರೇಶ್ ಅವರ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದ್ದು, ಈ ವೇಳೆ ಎಸ್.ಟಿ. ಸೋಮಶೇಖರ್ ಬಾರೋ ಕಾರ್ಮಿಕ ಸುಮ್ಮನೆ ಕುಳಿತುಕೊಂಡಿದ್ದೀಯಲ್ಲ ಎಂದು ಕರೆದಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಶಿವರಾಮ್ ಹೆಬ್ಬಾರ್, ಅವನ ವಯಕ್ತಿಕ ತರಲೆಗೆ ನಾನೇಕೆ ಬರಲಿ? ನಾನು ಬರುವುದಿಲ್ಲ ಎಂದು ಹೇಳಿ ತಮ್ಮ ಆಸನದಲ್ಲಿ ಕುಳಿತುಕೊಂಡಿದ್ದು, ಧರಣಿಯಲ್ಲಿ ಪಾಲ್ಗೊಳ್ಳದೇ ಗಮನಸೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...