alex Certify ಅಪಾಯಮಟ್ಟಕ್ಕೇರಿದ ನದಿಗೆ ಹಾರಿ ಯುವಕನ ಹುಚ್ಚಾಟ, ಪೊಲೀಸರೆದುರು ನಾನು ನುರಿತ ಈಜುಗಾರ ಎಂದು ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯಮಟ್ಟಕ್ಕೇರಿದ ನದಿಗೆ ಹಾರಿ ಯುವಕನ ಹುಚ್ಚಾಟ, ಪೊಲೀಸರೆದುರು ನಾನು ನುರಿತ ಈಜುಗಾರ ಎಂದು ಹೇಳಿಕೆ

ಶಿವಮೊಗ್ಗ: ತುಂಬಿ ಹರಿತ್ತಿರುವ ತುಂಗಾ ನದಿಗೆ ಹಾರಿಗೆ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ. ಸೇತುವೆ ಮೇಲಿಂದ ಹಾರಿದ ಯುವಕ ಈಜಿಕೊಂಡು ದಡ ಸೇರಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿವಮೊಗ್ಗ ನಗರದ ಹೊಳೆ ಸೇತುವೆ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ತಡೆಗೋಡೆ ಮೇಲಿನಿಂದ ಯುವಕ ನದಿಗೆ ಹಾರಿದ್ದಾನೆ. ಸ್ವಲ್ಪ ಹೊತ್ತು ತುಂಬಿ ಹರಿದ ನದಿಯಲ್ಲಿ ಈಜಿ ದಡ ಸೇರಿದ್ದಾನೆ. ರಭಸವಾಗಿ ನೀರು ಹರಿಯುತ್ತಿದ್ದು, ಯುವಕನ ಹುಚ್ಚಾಟ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೋಟೆ ಠಾಣೆ ಪೊಲೀಸರು ವಿಡಿಯೋದಲ್ಲಿನ ಯುವಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಯುವಕನ ಹೆಸರು ಗಂಗಪ್ಪ ಎಂದು ಗೊತ್ತಾಗಿದೆ. ರಾಜೀವ್ ಗಾಂಧಿ ಬಡಾವಣೆ ನಿವಾಸಿ ಗಂಗಪ್ಪ ತಾನು ನುರಿತ ಈಜುಗಾರ ಎಂದು ಹೇಳಿದ್ದಾನೆ.

ಆದರೆ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಗ ಈಜಾಡುವುದು, ಪ್ರಾಣಕ್ಕೆ ಅಪಾಯಕಾರಿ ಎಂದು ತಿಳಿದಿದ್ದರೂ ಸಹಾ, ನದಿಗೆ ಹಾರಿ ಈಜಾಡಿ ನಿರ್ಲಕ್ಷತನ ತೋರಿರುತ್ತಾನೆ. ಆದ್ದರಿಂದ ಯುವಕನ ವಿರುದ್ಧ ಲಘು ಪ್ರಕರಣ ದಾಖಲಿಸಿ, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...