alex Certify ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ದೊರೆತ ಚಿನ್ನಾಭರಣ ಮತ್ತು ನಗದು ಇದ್ದ ಪರ್ಸ್ ಅನ್ನು ವಾರಸುದಾರರಿಗೆ ಮರಳಿಸುವ ಮೂಲಕ ರೈಲ್ವೆ ಸಿಬ್ಬಂದಿ ಪ್ರಾಮಾಣಿಕತೆ ತೋರಿದ್ದಾರೆ.

ಶಿವಮೊಗ್ಗದ ಕೆಆರ್ ಪುರಂ ನಿವಾಸಿ ರಾಜೇಶ್ವರಿ ಅವರು ಮೈಸೂರಿಗೆ ತೆರಳಲು ಟಿಕೆಟ್ ಖರೀದಿಸುವ ವೇಳೆ ಟಿಕೆಟ್ ಕೌಂಟರ್ ಬಳಿ ಅವರ ಪರ್ಸ್ ಬಿದ್ದಿದೆ. ಅದರಲ್ಲಿ 1.44 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಹಾಗೂ 520 ರೂಪಾಯಿ ನಗದು ಇತ್ತು.

ಟಿಕೆಟ್ ಖರೀದಿಸಿ ಎರಡನೇ ಪ್ಲಾಟ್ ಫಾರಂ ಕಡೆಗೆ ಅವರು ತೆರಳುವ ಸಂದರ್ಭದಲ್ಲಿ ಪರ್ಸ್ ಇಲ್ಲದಿರುವುದನ್ನು ಕಂಡು ಕೌಂಟರ್ ಬಳಿ ಬಂದು ಹುಡುಕಾಟ ನಡೆಸಿದ್ದಾರೆ. ಆರ್.ಪಿ.ಎಫ್. ಠಾಣೆಗೆ ಮಾಹಿತಿ ನೀಡಿದ್ದು, ಈ ವೇಳೆ ಕೌಂಟರ್ ಬಳಿ ರೈಲ್ವೆ ಸಿಬ್ಬಂದಿಗಳಾದ ಬಿ.ಎ. ರಮೇಶ್ ಮತ್ತು ಮಂಜುನಾಥ್ ಅವರಿಗೆ ಪರ್ಸ್ ಸಿಕ್ಕಿದ್ದು, ಪರಿಶೀಲನೆ ಬಳಿಕ ಅದನ್ನು ರಾಜೇಶ್ವರಿ ಅವರಿಗೆ ಹಿಂತಿರುಗಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...