alex Certify ನನಸಾಯ್ತು ಶಿರಾ ಜನರ ಕನಸು: 40 ವರ್ಷದ ಬೇಡಿಕೆ 30 ದಿನದಲ್ಲಿ ಈಡೇರಿಸಿ ಸಂತಸ ತಂದ ಸಿಎಂ ಯಡಿಯೂರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನಸಾಯ್ತು ಶಿರಾ ಜನರ ಕನಸು: 40 ವರ್ಷದ ಬೇಡಿಕೆ 30 ದಿನದಲ್ಲಿ ಈಡೇರಿಸಿ ಸಂತಸ ತಂದ ಸಿಎಂ ಯಡಿಯೂರಪ್ಪ

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಮದಲೂರು ಕೆರೆಗೆ ಹೇಮಾವತಿ ನದಿ ನೀರು ಹರಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು.

ಅಂತೆಯೇ ಮದಲೂರು ಕೆರೆಗೆ ಹೇಮಾವತಿ ನದಿ ನೀರನ್ನು ಹರಿಸಲಾಗಿದೆ ಇದರಿಂದಾಗಿ 40 ವರ್ಷಗಳ ಕನಸು ನನಸಾಗಿದೆ. ಶಿರಾ ಜನರ 40 ವರ್ಷದ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಈಡೇರಿಸಿದ್ದಾರೆ. ಕಳ್ಳಂಬೆಳ್ಳ ಕೆರೆಯಿಂದ 200 ಕ್ಯೂಸೆಕ್ ಹೇಮಾವತಿ ನದಿ ನೀರನ್ನು ನಾಲೆಯ ಮೂಲಕ ಬಿಡುಗಡೆ ಮಾಡಲಾಗಿದ್ದು ಮದಲೂರು ಕೆರೆಗೆ ನೀರು ಹರಿದಿದೆ. 6 ತಿಂಗಳ ಒಳಗೆ ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸುವ ಭರವಸೆ ನೀಡಿದ್ದ ಸಿಎಂ 30 ದಿನದಲ್ಲಿಯೇ ನೀರು ಹರಿಸುವ ಮೂಲಕ ಶಿರಾ ಜನರಲ್ಲಿ ಸಂತಸ ತಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...